Connect with us

Dvgsuddi Kannada | online news portal | Kannada news online

ದಾವಣಗೆರೆ: ದೊಡ್ಡಬಾತಿ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಹೆಚ್.ಎಸ್. ಶಿವಶಂಕರ್ ಪುನರಾಯ್ಕೆ

h s shivashankar

ದಾವಣಗೆರೆ

ದಾವಣಗೆರೆ: ದೊಡ್ಡಬಾತಿ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಹೆಚ್.ಎಸ್. ಶಿವಶಂಕರ್ ಪುನರಾಯ್ಕೆ

ದಾವಣಗೆರೆ: ದೊಡ್ಡಬಾತಿ ಭದ್ರಾಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕಾರ್ಖಾನೆಯ ಹಾಲಿ ಅಧ್ಯಕ್ಷ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ದಾವಣಗೆರೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್. ಮಂಜುಳಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಕಾರ್ಖಾನೆಯ ಆಡಳಿತಾಧಿಕಾರಿಯಾಗಿದ್ದ ಅಪರ ಜಿಲ್ಲಾಧಿಕಾರಿ ಲೋಕೇಶ್ , ನೂತನ ಅಧ್ಯಕ್ಷ ಹೆಚ್.ಎಸ್. ಶಿವಶಂಕರ್ ಗೆ ಅಧಿಕಾರ ಹಸ್ತಾಂತರಿಸಿದರು.

  • ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
  • ಹಾಲಿ‌ ಅಧ್ಯಕ್ಷ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವಿರೋಧ ಪುನರಾಯ್ಕೆ
  • ಕಾರ್ಖಾನೆಯ ಆಡಳಿತ ಮಂಡಳಿಗೆ ಸತತ 5ನೇ ಬಾರಿಗೆ ಅಧ್ಯಕ್ಷರಾದ ಹೆಚ್.ಎಸ್. ಶಿವಶಂಕರ್
  • ಉಪಾಧ್ಯಕ್ಷರಾಗಿ ಬಿಳಸನೂರಿನ ಬಿ.ಆರ್. ರುದ್ರೇಶ್ ಆಯ್ಕೆ

ಕಾರ್ಖಾನೆಯ ಆಡಳಿತ ಮಂಡಳಿಗೆ ನ. 4ರಂದು ನಡೆದ‌ 2024-2029 ರ ಅವಧಿಯ ನಿರ್ದೇಶಕ ಮಂಡಳಿ ಚುನಾವಣೆ ನಡೆದಿತ್ತು. ಕಾರ್ಖಾನೆಯ ಸಭಾಂಗಣದಲ್ಲಿ ನ.20 ರಂದು ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಒಮ್ಮತದಿಂದ ಆಯ್ಕೆ ಪ್ರಕ್ರಿಯೆ ನಡೆಯಿತು.ಕಾರ್ಖಾನೆಯ ಆಡಳಿತ ಮಂಡಳಿಗೆ 32 ವರ್ಷಗಳ ನಂತರ ನಡೆದಿದ್ದ ಚುನಾವಣೆಯಲ್ಲಿ 5 ಬಾರಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಹೆಚ್.ಎಸ್.ಶಿವಶಂಕರ್ ಅವರೂ ಸೇರಿದಂತೆ, ಅವರ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಎಲ್ಲಾ 14 ಸದಸ್ಯರು ಜಯ ಗಳಿಸಿದ್ದರು.

ಕಾರ್ಖಾನೆಯ ಆಡಳಿತ ಮಂಡಳಿಗೆ ಸತತ 4 ಬಾರಿ ಅಧ್ಯಕ್ಷರಾಗಿದ್ದ ಹೆಚ್.ಎಸ್. ಶಿವಶಂಕರ್ ಅವರು, ಈಗ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹೆಚ್.ಎಸ್. ಶಿವಶಂಕರ್ ಅವರ ಹೆಸರನ್ನು ನಿರ್ದೇಶಕ ಮಲೇಬೆನ್ನೂರಿನ ಬಿ. ಚಿದಾನಂದಸೂಚಿಸಿದಾಗ, ಅದನ್ನು ದೀಟೂರಿನ ಡಿ.ವಿ. ಚಂದ್ರಶೇಖರಪ್ಪ ಅನುಮೋದಿಸಿದರು.

ಉಪಾಧ್ಯಕ್ಷರಾಗಿ ಬಿಳಸನೂರಿನ ಬಿ.ಆರ್. ರುದ್ರೇಶ್ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರುದ್ರೇಶ್ ಅವರ
ಹೆಸರನ್ನು ನಂದಿತಾವರೆಯ ಎಂ. ಚಂದ್ರಶೇಖರಯ್ಯ ಸೂಚಿಸಿದಾಗ, ವಾಸನದ ಜಿ. ಬಸವರಾಜಪ್ಪ ಅನುಮೋದಿಸಿದರು.

ನಿರ್ದೇಶಕರುಗಳಾದ ಹುಲಿಕಟ್ಟೆಯ ಎ.ಆರ್. ಆನಂದ ಪಾಟೀಲ್, ಸಿರಿಗೆರೆ (ಹರಿಹರ) ಯ ಎಂ.ಜಿ. ಪರಮೇಶ್ವರಗೌಡ, ಯಲವಟ್ಟಿಯ ದೊಡ್ಡಗೌಡ್ರ ಮುರಿಗೆಪ್ಪ, ಸಿರಿಗೆರೆ (ಹರಿಹರ) ಯ ಎನ್.ಜಿ. ರಾಮನಗೌಡ, ದೊಡ್ಡಬಾತಿಯ ಬಿ.ಜಿ. ವಿಶ್ವಂಬರ, ರಾಣೇಬೆನ್ನೂರಿನ ರಾಜೇಶ್ವರಿ ಪಾಟೀಲ್, ದಾವಣಗೆರೆಯ ಕೆ.ಸಿ.
ಮಮತಾ, ಬನ್ನಿಕೋಡು ಟಿ. ಹಾಲಪ್ಪ ಕೋಸಿ, ಮಲೇಬೆನ್ನೂರಿನ ಪೂಜಾ‌, ಧೂಳೆಹೊಳೆಯ ಕೆ.ಜಿ. ರಾಮನಗೌಡ, ಬನ್ನಿಕೋಡುಗ್ರಾಮದ ಜೆ.ಕೆ. ರಾಮಚಂದ್ರಪ್ಪ ಕೆ.ಆರ್. ಪ್ರಕಾಶ್, ಹೊಳೆಸಿರಿಗೆರೆಯ ಈಶ್ವರಪ್ಪ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

davangere lokayukta visit 2
davangere mahanagara palike dvgsuddi
davangere lokayukta 2
Morarji Desai school 1
davangere lokayukta visit 1
Advertisement
Advertisement Enter ad code here

Title

To Top