Connect with us

Dvgsuddi Kannada | online news portal | Kannada news online

ದಾವಣಗೆರೆ: ನಾಲ್ಕೈದು ದಿನದಿಂದ ಕುಸಿತದಲ್ಲಿದ್ದ ಅಡಿಕೆ ಬೆಲೆ ಮತ್ತೆ ಚೇತರಿಕೆ…

ದಾವಣಗೆರೆ

ದಾವಣಗೆರೆ: ನಾಲ್ಕೈದು ದಿನದಿಂದ ಕುಸಿತದಲ್ಲಿದ್ದ ಅಡಿಕೆ ಬೆಲೆ ಮತ್ತೆ ಚೇತರಿಕೆ…

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಕಳೆದ ನಾಲ್ಕೈದು ದಿನದಿಂದ ಕುಸಿತ ಕಾಣುತ್ತಿದ್ದ ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡಿದೆ. ಮಾರ್ಚ್ ಅಂತ್ಯದಲ್ಲಿ 45 ಸಾವಿರಕ್ಕೆ ಕುಸಿದಿದ್ದ ದರ, ಏಪ್ರಿಲ್ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಬೆಲೆ ಏರಿಕೆಯತ್ತ‌ ಮುಖ ಮಾಡಿತ್ತು. ಗರಿಷ್ಠ 50 ಸಾವಿರ ಗಡಿ ತಲುಪಿತ್ತು. ಆದರೆ, ಕಳೆದ ನಾಲ್ಕೈದು ದಿನದಿಂದ ಇಳಿಕೆ ಕಂಡಿತ್ತು. ಇದೀಗ ಮತ್ತೆ ಚೇತರಿಕೆ ಕಂಡಿದೆ. ಪ್ರತಿ ಕ್ವಿಂಟಾಲ್ ಬೆಲೆ ಇಂದು (ಏ.28) ಗರಿಷ್ಠ ಬೆಲೆ 48,500 ಮರಾಟವಾಗಿದೆ. ನಿನ್ನೆಯ ಮಾರುಕಟ್ಟೆಗೆ ಹೊಲಿಸಿದ್ರೆ ಇಂದು 400 ರೂಪಾಯಿ ಏರಿಕೆ ಕಂಡಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ವಹಿವಾಟಿನಲ್ಲಿ ಏ.28 ರಂದು ಪ್ರತಿ ಕ್ವಿಂಟಾಲ್ ಗೆ ಕನಿಷ್ಠ ಬೆಲೆ 46,569, ಗರಿಷ್ಠ ಬೆಲೆ 48,500 ಹಾಗೂ ಸರಾಸರಿ ಬೆಲೆ 48,045 ರೂ. ಆಗಿದೆ. ಇದೇ ವೇಳೆ ಬೆಟ್ಟೆ ಅಡಿಕೆ ಗರಿಷ್ಠ 36,229 ರೂ.ಗೆ ಮಾರಾಟವಾಗಿದೆ,

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top