Connect with us

Dvgsuddi Kannada | online news portal | Kannada news online

ದಾವಣಗೆರೆ; ಉಚಿತ ಸಾಮೂಹಿಕ ವಿವಾಹ,ಉಪನಯನ; ನೋಂದಣಿಗೆ ಮೇ1ರವರೆಗೆ ಅವಕಾಶ

ದಾವಣಗೆರೆ

ದಾವಣಗೆರೆ; ಉಚಿತ ಸಾಮೂಹಿಕ ವಿವಾಹ,ಉಪನಯನ; ನೋಂದಣಿಗೆ ಮೇ1ರವರೆಗೆ ಅವಕಾಶ

ದಾವಣಗೆರೆ: ನಗರದ ದೈವಜ್ಞ ದಿವ್ಯ ಜ್ಯೋತಿ ಮಿತ್ರ ಮಂಡಳಿ ವತಿಯಿಂದ ಮೇ.11ರಂದು ದೈವಜ್ಞ ಸಮಾಜ ಬಾಂಧವರಿಗೆ 23 ನೇ ವರ್ಷದ ಉಚಿತ ಸಾಮೂಹಿಕ ವಿವಾಹ,ಉಪನಯನ ಕಾರ್ಯಕ್ರಮಗಳನ್ನು ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಸಂಸ್ಥಾಪಕರಾದ ಹೆಚ್.ಜಿ. ಹನುಮಂತರಾವ್ ಪಾಲನಕರ್ ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಮಾಜದ ಬಡ ಕುಟುಂಬದ ವಟುಗಳು ಹಾಗೂ ವಧುವರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಡಳಿ ಕಳೆದ 23 ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಳೆದ ವರ್ಷ 25 ವಟುಗಳು ಅವಕಾಶ ಸದುಪಯೋಗ ಪಡಿಸಿಕೊಂಡಿದ್ದು, ಈ ಬಾರಿಯೂ ಹೆಚ್ಚಿನ ಬಾಂಧವರು ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಮಂಡಳಿ ಅಧ್ಯಕ್ಷ ವಿಮಲೇಶ್ವರ್ ಜಿ. ರೇವಣಕರ್ ಮಾತನಾಡಿ, ಉಪನಯ ಹಾಗೂ ವಿವಾಹ ಮಾಡಿಕೊಳ್ಳಲು ಇಚ್ಛಿಸುವವರು ಮೇ.1ರೊಳಗೆ ನೋಂದಾಯಿಸಲು ಅವಕಾಶವಿದೆ. ಮಂಡಳಿಯ ಸಂಸ್ಥಾಪಕ ಹನುಮಂತರಾವ್ ಜಿ. ಪಾಲನಕರ್ ಮೊ: 7899881161,ವಿಶ್ವೇಶ್ವರ ಜಿ. ರೇವಣಕರ್ ಮೊ: 9448929964 ಸಂಪರ್ಕಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎ. ವೆರ್ಣೇಕರ್, ಗುರುನಾಥ್ ಡಿ. ಪಾಲನಕರ್, ಮೂರ್ತಿ ಜಿ. ಕುಡ್ತಕರ್ ಇನ್ನಿತರರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top