Connect with us

Dvgsuddi Kannada | online news portal | Kannada news online

ಎಸ್ಸಿ, ಎಸ್ಟಿ ಸಮುದಾಯ ಪರಸ್ಪರ ಕಚ್ಚಾಟ ನಿಲ್ಲಿಸಿ ಒಂದಾಗಬೇಕು; ಮಾದಾರ ಚನ್ನಯ್ಯ ಸ್ವಾಮೀಜಿ

ಪ್ರಮುಖ ಸುದ್ದಿ

ಎಸ್ಸಿ, ಎಸ್ಟಿ ಸಮುದಾಯ ಪರಸ್ಪರ ಕಚ್ಚಾಟ ನಿಲ್ಲಿಸಿ ಒಂದಾಗಬೇಕು; ಮಾದಾರ ಚನ್ನಯ್ಯ ಸ್ವಾಮೀಜಿ

ದಾವಣಗೆರೆ: ವಿಧಾನಸಭೆಯಲ್ಲಿ ಎಸ್​ಸಿ, ಎಸ್​ಟಿಯ 52 ಶಾಸಕರಿದ್ದಾರೆ. ಒಟ್ಟು 52 ಶಾಸಕರಿದ್ದರೂ ಅಧಿಕಾರ ಹಿಡಿಯಲಾಗಿಲ್ಲ. ಎಸ್​ಸಿ, ಎಸ್​ಟಿ ಸಮುದಾಯದವರು ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಿ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಸ್ವಾಭಿಮಾನಿ ಎಸ್​ಸಿ, ಎಸ್​ಟಿ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್​ಎಸ್​ಎಸ್​ ಒಂದಿದೆ, ಡಿಎಸ್​ಎಸ್ ಹತ್ತಾರಿವೆ. ಹತ್ತಾರು ಸಂಘಟನೆ ಮಾಡುವುದನ್ನು ನಿಲ್ಲಿಸಿ ಒಂದಾಗಬೇಕು ಎಂದರು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಉಪಜಾತಿಗಳಿವೆ. ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಉಪಜಾತಿಗಳಿವೆ. ಮುಂದಿನ ದಿನಗಳಲ್ಲಿ ಎಸ್​ಸಿ, ಎಸ್​ಟಿ ಸ್ವಾಮೀಜಿಗಳ ಸಭೆ ನಡೆಸುತ್ತೇವೆ. ಎಸ್​ಸಿ, ಎಸ್​ಟಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

ಸಭೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಪ್ರತಿಧ್ವನಿಸಿದೆ. ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಸೇರಿ ಚಿಂತನೆ ನಡೆಸಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠ, ಛಲವಾದಿ ಗುರುಪೀಠದ ಶ್ರೀಗಳು ಭಾಗಿ ಆಗಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top