ಬೆಂಗಳೂರು: ಶ್ರೀ ತರಳಬಾಳು ಬೃಹನ್ಮಠದ ಬಗ್ಗೆ ಸದಾ ಭಕ್ತಿ ಗೌರವ ಹೊಂದಿರುವ ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಫಲ, ಪುಷ್ಪಹಾರದೊಂದಿಗೆ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದರು. ಸಿದ್ದರಾಮಯ್ಯ ಶ್ರೀಗಳು ಶಾಲು, ಹಾರ, ಸ್ಮರಣಿಕೆಯೊಂದಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ , ಭೈರತಿ ಸುರೇಶ್ ಶಾಸಕರುಗಳಾದ ತಮ್ಮಯ್ಯ, ಶಿವಗಂಗಾ ಬಸವರಾಜು, ಡಿ.ಜಿ.ಶಾಂತನಗೌಡ, ಬಸವಂತಪ್ಪ, ಮಾಜಿ ಶಾಸಕ ಹೆಚ್.ಎಂ ರೇವಣ್ಣ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ಐಪಿಎಸ್ ಯತೀಶ್ ಚಂದ್ರ, ತರಳಬಾಳು ಕೇಂದ್ರದ ಕಾರ್ಯದರ್ಶಿ ಬಾತಿ ವಿಶ್ವನಾಥ್ ಸೇರಿದಂತೆ ಅಪಾರ ಗಣ್ಯರು. ತರಳಬಾಳು ಬೃಹನ್ಮಠದ ಸದ್ಭಕ್ತರು ಹಾಜರಿದ್ದರು.



