ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯ ಪ್ರದೇಶ ಸುತ್ತಮುತ್ತ ಭಾರಿ ಮಳರಯಾಗುತ್ತಿದ್ದು, ಒಳಹರಿವು ಭಾರಿ ಪ್ರಮಾಣದಲ್ಲಿ ಏರಕೆಯಾಗಿದೆ. ಒಂದೇ ದಿನ ಮೂರು ಅಡಿಗೂ ಹೆಚ್ಚು ನೀರು ಏರಿಕೆಯಾಗಿದೆ. ನಿನ್ನೆ (ಜು.06) 26,004 ಕ್ಯೂಸೆಕ್ ಒಳ ಹರಿವು ಇತ್ತು. ಇಂದು (ಜು.07) 31667 ಕ್ಯೂಸೆಕ್ ಒಳ ಹರಿವಿದೆ. ಹೀಗಾಗಿ ನೀರಿನ ಒಳ ಹರಿವಿನ ಪ್ರಮಾಣ ಏರಿಕೆಯಾಗಿದ್ದು, ಇಂದು ಜು.07 ಬೆಳಗ್ಗೆ ವೇಳೆಗೆ ನೀರಿನ ಮಟ್ಟ 163.9 ಅಡಿಗೆ ತಲುಪಿದೆ. ನಿನ್ನೆ 160.11 ಅಡಿ ಇತ್ತು.
ಪ್ರಾರಂಭದಲ್ಲಿ ಕೈಕೊಟ್ಟಿದ್ದ ಮಂಗಾರು ಮಳೆ ಒಂದು ತಿಂಗಳ ನಂತರ ಚೇತರಿಕೆ ಕಂಡಿದೆ. ಕಳೆದ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಳ ಹರಿವು ಹೆಚ್ಚಳವಾಗಿದೆ. ಹಂಗಾಮಿನ ಭತ್ತ ಬೆಳೆಯುವ ರೈತರ ಸಂತಸಕ್ಕೆ ಕಾರಣವಾಗಿದ್ದು, ಭತ್ತ ನಾಟಿಗೆ ಬೀಜ ಚೆಲ್ಲುವ ಕಾರ್ಯ ಭರದಿಂದ ಸಾಗುತ್ತಿದೆ. ಕಾಡಾ ಜು.15 ಕ್ಕೆ 165 ಅಡಿ ನೀರು ತುಂಬಿದ್ರೆ ಮಾತ್ರ ನಾಲೆಗೆ ನೀರು ಬಿಡುವುದಾಗಿ ಹೇಳಿತ್ತು. ಆದರೆ, ಇದೀಗ ಬರೋಬ್ಬರಿ 163 ಅಡಿ ತುಂಬಿದೆ.
- ನೀರಿನ ಸಂಗ್ರಹದ ವಿವರ
- ಇಂದಿನ ನೀರಿನ ಮಟ್ಟ 163.09 ಅಡಿ
- ಪೂರ್ಣ ಮಟ್ಟ:186 ಅಡಿ
- ಇಂದಿನ ಸಾಮರ್ಥ್ಯ: 46.495 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು: 31,667 ಕ್ಯೂಸೆಕ್
- ಒಟ್ಟು ಹೊರಹರಿವು: 139 ಕ್ಯೂಸೆಕ್
- ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
- ಎಡದಂಡೆ ನಾಲೆ: 0.00ಕ್ಯೂಸೆಕ್ಸ್
- ಕಳೆದ ವರ್ಷ ಈ ದಿನ : 155.06 ಅಡಿ



