ವಿದ್ಯುತ್ ತಂತಿ ಹಾಯ್ದು ಹೋದ ಅಡಿಕೆ ತೋಟ ಮಾಲೀಕರೇ ಎಚ್ಚರ. ಅಡಿಕೆ ಮರದ ಗರಿಗಳು ವಿದ್ಯುತ್ ತಂತಿಗೆ ತಗುಲುತ್ತಿದ್ರೆ ಕೂಡಲೇ ಎಚ್ಚರಿಕೆ ವಹಿಸಿ, ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ. ಹೌದು, ವಿದ್ಯುತ್ ತಂತಿ ತಗುಲಿ 400 ಅಡಿಕೆ ಮರ ನಾಶವಾಗಿವೆ.
ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ನಾಗರಕಟ್ಟೆ ಗ್ರಾಮದಲ್ಲಿ. ವಿದ್ಯುತ್ ತಂತಿ ತಗುಲಿ ಅಡಿಕೆ ಗಿಡಗಳು ಸುಟ್ಟಿವೆ.ಅಡಿಕೆ ತೋಟದಲ್ಲಿ 350ರಿಂದ 400 ಗಿಡಗಳು ಭಸ್ಮವಾಗಿದ್ದು, 2-3 ವರ್ಷವಿದ್ದ ಸಣ್ಣ ಅಡಿಕೆ ಗಿಡಗಳು ಸಂಪೂರ್ಣ ಸುಟ್ಟಿವೆ. 80 ಸಾವಿರಕ್ಕೂ ಅಧಿಕ ನಷ್ಟವಾಗಿದೆ.



