Connect with us

Dvgsuddi Kannada | online news portal | Kannada news online

ತೋಟಗಾರಿಕೆ ಇಲಾಖೆಯಲ್ಲಿ ಅಡಿಕೆ ಸಸಿಗಳು ಮಾರಾಟಕ್ಕೆ ಲಭ್ಯ

ಚನ್ನಗಿರಿ

ತೋಟಗಾರಿಕೆ ಇಲಾಖೆಯಲ್ಲಿ ಅಡಿಕೆ ಸಸಿಗಳು ಮಾರಾಟಕ್ಕೆ ಲಭ್ಯ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ತೋಟಗಾರಿಕೆ ಸಸ್ಯಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ನಾಟಿಗೆ ಸಿದ್ದವಿರುವ 20,000 ಅಡಿಕೆ ಸಸಿಗಳು ಇಲಾಖಾ ಎಸ್.ಆರ್ ದರದಲ್ಲಿ (ರೂ.20/-ಸಸಿಗೆ) ಲಭ್ಯವಿದೆ. ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳಿಗೆ ಎಂಎನ್‍ಆರ್‍ಇಜಿಎ ಯೋಜನೆಯಡಿ ಅಡಿಕೆ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮವಿದ್ದು, ರೈತರು ತೋಟಗಾರಿಕೆ ಸಸ್ಯ ಕ್ಷೇತ್ರದಲ್ಲಿ ಲಭ್ಯವಿರುವ ಅಡಿಕೆ ಸಸಿಗಳನ್ನು ಖರೀದಿ ಮಾಡಿದ್ದಲ್ಲಿ ಇಲಾಖೆಯ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಪ್ರಥಮ ಆದ್ಯತೆ ನೀಡಲಾಗುವುದು ಹಾಗೂ ಜಿಲ್ಲೆಯ ಇತರೆ ತಾಲ್ಲೂಕಿನ ರೈತರುಗಳು ಕೂಡ ಅಡಿಕೆ ಸಸಿಯನ್ನು ಖರೀದಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಿರಣ್ ಕುಮಾರ್ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೇಲಿಮಲ್ಲೂರು ತೋಟಗಾರಿಕೆ ಸಸ್ಯ ಕ್ಷೇತ್ರ ಹೊನ್ನಾಳಿ ಮೊ.ನಂ: 9591771724 ಅಥವಾ ಎಲ್ಲಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟೆಯಲ್ಲಿ ತಿಳಿಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top
(adsbygoogle = window.adsbygoogle || []).push({});