ಡಿವಿಜಿ ಸುದ್ದಿ, ದಾವಣಗೆರೆ: ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಬಗ್ಗೆ ಚನ್ನಗಿರಿ ಶಾಸಕರು ಏಕವಚನದಲ್ಲಿ ಮಾತ ಕಳೆದುಕೊಳ್ಳಬಾರದಿತ್ತು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದ್ದಾರೆ.
ಸಂಸದ ಮತ್ತು ಶಾಸಕರ ಮಾತಿನ ಚಕಮಕಿಯನ್ನ ರಾಜಕೀಯಗೊಳಿಸಬಾರದು. ಸಂಸದರು ಮತ್ತು ಶಾಸಕರ ನಡುವೆ ಜನರ ಹಿತಾಸಕ್ತಿಯಿಂದ ಕೊಡಿರುವ ಸಂಘರ್ಷವಾಗಿತ್ತು ಎಂದಿದ್ದಾರೆ.

ಮೊದಲಿನಿಂದಲೂ ಸಂಸದ ಸಿದ್ದೇಶ್ವರರ ಜೊತೆ ಶಾಸಕ ಮಾಡಳ್ ವಿರೂಪಾಕ್ಷಪ್ಪನವರು ತುಂಬಾ ಸಲುಗೆಯಿಂದ ಇದ್ದವರು. ಮಾಡಾಳ್ ವಿರೂಪಾಕ್ಷಪ್ಪರವರು ಶಾಸಕರಾಗಲು ಸಿದ್ದೇಶ್ವರ ಕೊಡುಗೆ ತುಂಬಾ ಇದೆ. ಜಿ.ಎಂ. ಸಿದ್ದೇಶ್ವರ ಅವರ ಮೂರು ದಶಕಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಜಿಲ್ಲೆಯಲ್ಲಿ ತಾಲ್ಲೂಕು ಪಂಚಾಯತ ಜಿಲ್ಲಾ ಪಂಚಾಯತ ನಗರ ಸಭೆ, ಮಹಾನಗರ ಪಾಲಿಕೆ, ಬಿಜೆಪಿ ಆಡಳಿತ ಹಾಗೂ ಆರು ಶಾಸಕರ ಗೆಲುವಿನಲ್ಲಿ ಸಂಸದರ ಪ್ರಮುಖ ಪಾತ್ರವಿದೆ.
ಇದನ್ನು ಓದಿ: ಸಂಸದ ಜಿ.ಎಂ ಸಿದ್ದೇಶ್ವರ, ಶಾಸಕ ಮಾಡಾಳ್ ವಿರುಪಾಕ್ಷಪ್ಪ ನಡುವೆ ಮಾತಿನ ಚಕಮಕಿ
ಬಿಜೆಪಿ ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಿದ ಕೀರ್ತಿ ಸಂಸದರಿಗೆ ಸಲ್ಲುತ್ತದೆ. ಶಾಸಕ ಮಾಡಳ್ ವಿರೂಪಾಕ್ಷಪ್ಪನವರು ಸಂಸದರ ಬಗ್ಗೆ ತಾಳ್ಮೆ ಕಳೆದುಕೊಳ್ಳಬಾರದಿತ್ತು. ಶಾಸಕರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಂಸದರ ಬಗ್ಗೆ ಹಗುರವಾಗಿ ಬಿಂಬಿಸುವುದು ಸರಿಯಲ್ಲ. ಈ ಘಟನೆಯನ್ನು ಪಕ್ಷದ ವರಿಷ್ಠರು ಸರಿ ಮಾಡುತ್ತಾರೆ ಎಂದು ಲೋಕಿಕೆರೆ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.



