ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ ವಿರುಪಾಕ್ಷಪ್ಪ ಅವರು ಇಂದು ನಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕೊರೋನಾ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಬಡವರಿಗೆ ಒಂದು ಸಾವಿರ ಆಹಾರ ಕಿಟ್ ವಿತರಿಸಿದರು.

ಉಳ್ಳವರಿಂದ ದೇಣಿಗೆ ಸಂಗ್ರಹಿಸಿ, ತಮ್ಮ ಅನುದಾನವನ್ನು ಸೇರಿಸಿ ಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡಿದರು. ಇಂದು ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಅಹಾರದ ಕಿಟ್ಟುಗಳನ್ನು ವಿತರಿಸಿ ಮಾತನಾಡಿದ ಮಾಡಾಳ್ ವಿರುಪಾಕ್ಷಪ್ಪ, ಮಹಾಮಾರಿ ಕೊರೊನಾ ರೋಗದ ಬಗ್ಗೆ ಜಾಗೃತವಾಗಿರಬೇಕು. ಸರ್ಕಾರ ನಿಮ್ಮಗಳ ಪರವಾಗಿದೆ ಏನೇ ಸಮಸ್ಯೆ ಇರಲಿ, ಸಹಾಯಕ್ಕೆ ಸದಾ ಸಿದ್ಧವಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ , ತಹಶೀಲ್ದಾರ್ ಜೆಎನ್ ನಾಗರಾಜ್, ತಾ ಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ . ಪೋಲಿಸ್ ವೃತ್ತ ನಿರೀಕ್ಷ ಆರ್ ಆರ್ ಪಾಟೀಲ್ , ಚನ್ನಗಿರಿ ಪಿಎಸ್ಐ ಜಗದೀಶ್ . ಜಿ ಪಂ ಸದಸ್ಯ ಲೋಕೇಶ್, ಬಗರ್ ಹುಕ್ಕುಂ ಕಮಿಟಿ ಸದಸ್ಯ ಹೆಚ್ . ಕೃಷ್ಣಪ್ಪ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರುಗಳು ಉಪಸ್ಥಿತರಿದರು.



