ಭುವನೇಶ್ವರ್: ಇಡೀ ದೇಶದಲ್ಲಿ ಮೊದಲು ಲಾಕ್ಡೌನ್ ಆದೇಶವನ್ನು ಒಡಿಶಾ ರಾಜ್ಯ ಪರಿಷ್ಕರಿಸಿದ್ದು, ಏ. 30ರವರೆಗೂ ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಮೂಲಕ ದೇಶದಲ್ಲಿ ಲಾಕ್ಡೌನ್ ವಿಸ್ತರಿಸಿದ ಮೊದಲ ರಾಜ್ಯವಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸಿಎಂ ನವೀನ್ ಪಟ್ನಾಯಕ್, ದೇಶದಲ್ಲಿ ಏಪ್ರಿಲ್ 14 ವರೆಗೆ ಲಾಕ್ ಡೌನ್ ವಿಧಿಸಲಾಗಿತ್ತು. ಜನರ ಜೀವ ನಮ್ಮಗೆ ಮುಖ್ಯ ಈ ನಿಟ್ಟಿನಲ್ಲಿ ಲಾಕ್ಡೌನ್ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಏ. 30ರವರೆಗೂ ಯಾವುದೇ ವಿಮಾನ ಮತ್ತು ರೈಲು ಸಂಚಾರ ಆರಂಭಿಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ದೇಶದಲ್ಲೂ ಎರಡು ವಾರ ಲಾಕ್ಡೌನ್ ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ
ಒಡಿಶಾದಲ್ಲಿ ಮಾ. 15ರಂದು ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಈವರೆಗೂ ಒಡಿಶಾದಲ್ಲಿ 42 ಮಂದಿಗೆ ಸೋಂಕು ತಗುಲಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಈಗ ಇಡೀ ರಾಜ್ಯದಲ್ಲಿ ಲಾಕ್ಡೌನ್ ಆದೇಶವನ್ನು ವಿಸ್ತರಿಸಲಾಗಿದೆ.



