ದಾವಣಗೆರೆ: ಮನೆ ಕಳವು ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನ ಮಾಡಿದ್ದು, ಆರೋಪಿತರಿಂದ 2,81,000 ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ: ಫಸಲಿಗೆ ಬಂದ 610 ಅಡಿಕೆ ಮರ ಕಡಿದ ಪ್ರಕರಣ; ಆರೋಪಿಗಳ ಬಂಧನ
1. ದೇವಿರಮ್ಮ ಎಂಬುವವರ ಮನೆಯಲ್ಲಿ ಜೂ.12 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗ ಮುರಿದು ಗಾಡ್ರೇಜ್ ಬೀರುಗಳನ್ನು ಲಾಕರ್ ನ್ನು 12 ಗ್ರಾಂ ತೂಕದ ಬಂಗಾರದ ವಡವೆಗಳು, 150 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗದ್ದರು. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2. ಕಡ್ಳೆಬಾಳು ಗ್ರಾಮದ ಕರಿಬಸವೇಶ್ವರ ಎಂಬುವವರ ಮನೆಯಲ್ಲಿ ಜು.09 ರಂದು ಬೀಗ ಹಾಕಿದ ಮನೆಯಲ್ಲಿ ಯಾರೋ ಕಳ್ಳರು ಮನೆಯೊಳಗೆ ಪ್ರವೇಶ ಮಾಡಿ ಗಾಡ್ರೇಜ್ ಬೀರುಗಳನ್ನು ಲಾಕರ್ ನ್ನು ಮುರಿದು ಬಂಗಾರದ ವಡವೆಗಳನ್ನು ಹಾಗು ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಸಹ ಪ್ರಕರಣ ದಾಖಲಾಗಿತ್ತು.
ಮೇಲಿನ 02 ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿತರ ಹಾಗೂ ಸ್ವತ್ತಿನ ಪತ್ತೆಗಾಗಿ ಡಿವೈಎಸ್ಪಿ ಬಿ.ಎಸ್ ಬಸವರಾಜ್ ಹಾಗೂ ಗ್ರಾಮಾಂತರ ಠಾಣೆಯ ಪಿ.ಐ ಅಣ್ಣಯ್ಯ ಕೆ.ಟಿ ಮಾರ್ಗದರ್ಶನದಲ್ಲಿ ಪಿಎಸ್ ಐ ಪ್ರಭು ಡಿ ಕೆಳಗಿನ ಮನಿ (ಕಾ ಮತ್ತು ಸು), ಜೋವಿತ್ ರಾಜ್ ಹಾಗೂ ಸಿಬ್ಬಂದಿಗಳನ್ನೊಳಗಙಡವ ತಂಡವು ಪ್ರಕರಣತನಿಖೆ ಕೈಗೊಳ್ಳಲಾಗಿತ್ತು. ಈ ತಂಡ
ಪ್ರಕರಣ 01 ರಲ್ಲಿ ಆರೋಪಿತರಾದ ಎ1-ಮೈಲಾರಿ@ವಗ್ಗ ಮೈಲಾರಿ, 50 ವರ್ಷ, ಭದ್ರಾವತಿ ತಾಲ್ಲೂಕು, ಎ2-ಕುಮಾರ@ವಗ್ಗ ಕುಮಾರ, 36 ವರ್ಷ, ಭದ್ರಾವತಿ ತಾಲ್ಲೂಕು ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಸದರಿ ಪ್ರಕರಣದಲ್ಲಿ ಕಳುವಾಗಿದ್ದ ಮಾಲಿಗೆ ಸಂಬAಧಿಸಿದAತೆ 1,08,000/- ರೂ ಮೌಲ್ಯದ ಸ್ವತ್ತನ್ನು ಅಮಾನತ್ತುಪಡಿಸಿಕೊಂಡ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಡಿಸಿರುತ್ತಾರೆ.
ಪ್ರಕರಣ 02 ರಲ್ಲಿ ಕೃತ್ಯವೆಸಗಿದ್ದ ಆರೋಪಿತನಾದ ದೇವೇಂದ್ರ @ದೇವಾ, 27 ವರ್ಷ, ದಾವಣಗೆರೆ ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಸದರಿ ಕೇಸಿನಲ್ಲಿ ಕಳುವು ಮಾಡಿದ್ದ ಮಾಲಿಗೆ ಸಂಬAಧಿಸಿದAತೆ 1,73,000/- ರೂ ಮೌಲ್ಯದ ಸ್ವತ್ತನ್ನು ಅಮಾನತ್ತುಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಡಿಸಿರುತ್ತಾರೆ.
ಎರಡು ಪ್ರಕರಣಗಳಲ್ಲಿ ಒಟ್ಟು 2,81,000/- ರೂ ಮೌಲ್ಯದ ಕಳವು ಮಾಲನ್ನು ಆರೋಪಿತರಿಂದ ವಶಪಡಿಸಿಕೊಮಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರು ಉತ್ತಮ ಕರ್ತವ್ಯ ನಿರ್ವಹಿಸಿದ ತಂಡಕ್ಕೆ ಶೇಖರ್ ಹೆಚ್.ಟಿ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.


