ಭದ್ರಾ ಜಲಾಶಯ: ಒಳ ಹರಿವು ಭರ್ಜರಿ ಏರಿಕೆ; ನೀರಿನ ಮಟ್ಟ 139 ಅಡಿ ಒಳ ಹರಿವು 7,919 ಕ್ಯೂಸೆಕ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ವ್ಯಾಪ್ತಿಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ತಿಂಗಳ ಮಳೆ ಕೊರತೆಯಿಂದ ಖಾಲಿ ಖಾಲಿಯಾಗಿದ್ದ ಡ್ಯಾಂಗೆ ಈಗ ಭರ್ಜರಿ ಒಳ ಹರಿವು ಏರಿಕೆಯಾಗಿದೆ.

ಈಗಾಗಲೇ ಮುಂಗಾರು‌ ಬೆಳೆಗೆ ನಾಲೆಯಿಂದ ನೀರು ಹರಿಸಲು ಸಾಧ್ಯವಿಲ್ಲ‌ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಪ್ರಕಟಿಸಿದೆ. ಇದರಿಂದ ಆತಂಕ್ಕೆ ಒಳಗಾಗಿದ್ದ ರೈತರಲ್ಲಿ ಮಳೆ ಅಬ್ಬರ, ಒಳ ಹರಿವು ಹೆಚ್ಚಳದಿಂದ ರೈತರಲ್ಲಿ ಡ್ಯಾಂ ತುಂಬುವ ಹೊಸ ಭರವಸೆ ಮೂಡಿದೆ. ಒಂದು ವೇಳೆ ಇದೇ ರೀತಿ ಮಳೆ‌ ಮುಂದುವರೆದು ಡ್ಯಾಂ‌ ತುಂಬಿದ್ರೆ ಅಷ್ಟೇ‌ ಸಲಹಾ‌ ಸಮಿತಿ‌‌ ಸಭೆ‌ ಕರೆದು, ಈ ಬಾರಿ ಮುಂಗಾರು ಬೆಳೆಗೆ ನಾಲೆಯಿಂದ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿಗಮ ತಿಳಿಸಿದೆ.

ಇಂದು(ಜು.5) ಬೆಳಗ್ಗೆ 6ಗಂಟೆ ಹೊತ್ತಿಗೆ ಒಳ ಹರಿವು 7,919 ಕ್ಯೂಸೆಕ್ ನಷ್ಟಿದೆ. ಕಳೆದ ವಾರ 300 ಕ್ಯೂಸೆಕ್ ನಷ್ಟಿದ್ದ ಒಳ‌ಹರಿವು ಒಮ್ಮೆಲೇ 7,919 ಕ್ಯೂಸೆಕ್ ಗಡಿದಾಟಿದೆ. ಇದರಿಂದ ನೀರಿನ ಮಟ್ಟ 139 ಅಡಿ ತಲುಪಿದೆ.

ಈ ಬಾರಿಯ ಮುಂಗಾರು ಜೂನ್ ತಿಂಗಳ ಆರಂಭವಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದಿದ್ದರಿಂದ ಭದ್ರಾ ಜಲಾಶಯಕ್ಕೆ ನೀರಿನ ಒಳನ ಹರಿವು ಕುಂಠಿತವಾಗಿತ್ತು. ಇದೀಗ ಜುಲೈ ಆರಂಭದಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಿದೆ. ಅಚ್ಚುಕಟ್ಟು ಭಾಗದ ರೈತರು ನಿರಂತರ ಮಳೆಯಾಗಿ ಜಲಾಶಯ ಭರ್ತಿಯಾಗಿ ನಾಲೆಗೆ ನೀರು ಹರಿಯುವಂತಾಗಲಿ ಎಂದು ಪ್ರಾರ್ಥಿಸಿಸುತ್ತಿದ್ದಾರೆ.

ಭದ್ರಾ ಜಲಾಶಯ ಇಂದಿನ ( ಜು.5) ಒಳ ಹರಿವು 7,919ಕ್ಯೂಸೆಕ್ ಇದೆ. ನೀರಿನ‌ ಮಟ್ಟ 139 ಅಡಿಯಷ್ಟಿದೆ. ಕಳೆದ ವರ್ಷ ಇದೇ ದಿನ 164 ಅಡಿ ನೀರು ಇತ್ತು. ಈ ವರ್ಷ ಮಳೆ ನೀರಿಕ್ಷಿತ‌ ಮಟ್ಟದಷ್ಟು ಸುರಿದಿಲ್ಲ.

ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ

  • ದಿನಾಂಕ :2-7-2026
  • ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
  • ಪ್ರಸ್ತುತ ನೀರಿನ ಮಟ್ಟ ; 26,209 ಟಿಎಂಸಿ
  • ಗರಿಷ್ಠ ಮಟ್ಟ: 186ಅಡಿ
  • ಇಂದಿನ ಮಟ್ಟ:139;ಅಡಿ
  • ಒಳ ಹರಿವು: ): 7,819 ಕ್ಯೂಸೆಕ್
  • ಹೊರ ಹರಿವು : 211 ಕ್ಯೂಸೆಕ್
  • ಕ್ರೆಸ್ಟ್ ಗೇಟ್ : 00 ಕ್ಯೂಸೆಕ್
  • ಎಡ ದಂಡೆ : 50 ಕ್ಯೂ ಸೆಕ್
  • ಬಲ ದಂಡೆ : 00 ಕ್ಯೂಸೆಕ್
  • ಕಳೆದ ವರ್ಷ ಈ ದಿನದ ನೀರಿನ ಮಟ್ಟ: 168.5 ಅಡಿ
  • ಕಳೆದ ವರ್ಷದ ಇದೇ ದಿನ ಒಳಹರಿವು: 21,180 ಕ್ಯೂಸೆಕ್

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *