ದಾವಣಗೆರೆ: ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (pm fasal bima yojana) ಯೋಜನೆಯನ್ನು ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಎಸ್.ಬಿ.ಐ. ಜನರಲ್ ಇನ್ಷ್ಯೂರೆನ್ಸ್ ಕಂಪನಿ ಅನುಷ್ಠಾನಗೊಳಿಸಲಾಗುತ್ತಿದೆ.
ರೈತರು ಪ್ರಕೃತಿ ವಿಕೋಪಗಳಿಂದ ಉಂಟಾಗುವ ಇಳುವರಿ ನಷ್ಟ, ಬಿತ್ತನೆ ತಡೆ, ಬೆಳವಣಿಗೆ ಹಂತದ ಮಧ್ಯಂತರ ವಿಪತ್ತು, ಕೊಯ್ಲಿನ ನಂತರ ನಷ್ಟ ಹಾಗೂ ಸ್ಥಳೀಯ ವಿಪತ್ತುಗಳಿಂದಾಗುವ ಬೆಳೆ ಹಾನಿಯಿಂದ ರೈತರಿಗೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಪರಿಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದ್ದು, ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವ ಮೂಲಕ ತಮ್ಮ ಆದಾಯ ಸ್ಥಿರಗೊಳಿಸಿಕೊಳ್ಳಬಹುದು.
ದಾವಣಗೆರೆ ತಾಲ್ಲೂಕಿನ ಎಲ್ಲಾ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯ ಬೆಳೆಯಾಗಿ ಮೆಕ್ಕೆಜೋಳ, ರಾಗಿ, ಭತ್ತ ಮುಂದುವರೆದು ಹೋಬಳಿ ಮಟ್ಟದಲ್ಲಿ ಆನಗೋಡು ಹಾಗೂ ಮಾಯಕೊಂಡ ಹೋಬಳಿಗಳ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೊಗರಿ ಬೆಳೆಗಳಿಗೆ ಜುಲೈ 31 ವಿಮಾ ತುಂಬುವ ಕೊನೆಯ ದಿನವಾಗಿರುತ್ತದೆ. ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ. ತಿಳಿಸಿದ್ದಾರೆ.


