ದಾವಣಗೆರೆ: ಮನೆ ಕಳ್ಳತನ ಆರೋಪಿಯನ್ನು ಪೊಲೀಸು ಬಂಧನ ಮಾಡಿದ್ದು, ಅಂದಾಜು ಒಟ್ಟು 5,31,000 ರೂ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯಲಾಗಿದೆ.
ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಯರಗನಾಳ್ ಗ್ರಾಮದಲ್ಲಿ ದಿನಾಂಕ;-29/04/2026 ರಂದು ರಾತ್ರಿ 08-45 ಗಂಟೆಗೆ ಶಾರಸ ಎಂಬ ಮಹಿಳೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ ಮನೆಗೆ ಬಂದು ಬಂದು ಬಾಗಿಲು ತೆಗೆದು ಒಳಗೆ ಹೋಗಿದ್ದು ಮನೆಯ ಹಂಚು ತೆಗೆದು ಒಳಗೆ ಬಂದ ಖದೀಮರು, ಬೀರುವಿನಲ್ಲಿದ್ದ ಅಂದಾಜು ತೂಕ 40 ಗ್ರಾಂ, ಹಾಗೂ 70,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ದಾವಣಗೆರೆ: ಮರ ಕಡಿಯುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ..!
ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್ ಉಜ್ಜನಕೊಪ್ಪ ಉಸ್ತುವಾರಿಯಲ್ಲಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯಕ್ಕೆ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದೇಗೌಡ. ಹೆಚ್.ಎಂ ನೇತೃತ್ವದಲ್ಲಿ, ಪಿಎಸ್ಐ ಹೊಳಬಸಪ್ಪ ಹೋಳಿ ಮತ್ತು ಸಿಬ್ಬಂದಿ ಶಿವರಾಜ್, ಆನಂದ, ನಾಗರಾಜನಾಯ್ಕ, ಚನ್ನೇಶ ಎಸ್ ಆರ್, ಮಂಜಪ್ಪ ಕೆ, ಯಶವಂತಾಚಾರಿ, ತೀರ್ಥಪ್ಪ ಬಿ.ಪಿ, ಮುರುಳಿ ಬಿ.ಎನ್., ಪ್ರಸನ್ನ ಕೆ, ಪ್ರವೀಣಕುಮಾರ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯವರನ್ನೊಳಗೊಂಡ ತಂಡ ರಚನೆ ಮಾಡಿ ತನಿಖೆ ಕೈಗೊಳ್ಳಲಾಗಿತ್ತು.
ದಾವಣಗೆರೆ: ಈ ಏರಿಯಾದಲ್ಲಿ ಸಂ.4ಗಂಟೆ ವರೆಗೆ ವಿದ್ಯುತ್ ವ್ಯತ್ಯಯ
ತನಿಖಾ ತಂಡವು ತನಿಖಾ ಕಾಲದಲ್ಲಿ ಬಾತ್ಮಿದಾರರಿಂದ ಗ್ರಾಮದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ಹಾಗೂ ಪೂರಕವಾಗಿ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪ್ರಕರಣದ ಆರೋಪಿ ಶಿವರಾಜ ಪಿ.ಎಸ್, (36), ಡ್ರೈವರ್ ಕೆಲಸ, ವಾಸ: ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿದ್ದು, ಆರೋಪಿತನಿಂದ ಕಳ್ಳತನ ಮಾಡಿದ್ದ ಒಂದು ಜೊತೆ ಬಂಗಾರದ ಬಳೆ ಹಾಗೂ ಒಂದು ಕೊರಳ ಚೈನ್ ಇವುಗಳ ಅಂದಾಜು ತೂಕ 40 ಗ್ರಾಂ, ಅಂದಾಜು ಬೆಲೆ 4,91,000/- ರೂ. ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟರಾ ಸೈಕಲ್ ಅಂದಾಜು ಮೌಲ್ಯ 40,000/- ಒಟ್ಟು 5,31,000/- ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾವಣಗೆರೆ: ಸರ್ಕಾರದಿಂದ 200 ಮನೆ ಹಂಚಿಕೆಗೆ ಅರ್ಜಿ ಆಹ್ವಾನ
ಈ ಮೇಲ್ಕಂಡ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿತನನ್ನು ಪತ್ತೆ ಮಾಡಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿಗಳ ತಂಡಕ್ಕೆ ಎಸ್ಪಿ ಶೇಖರ್ ಹೆಚ್.ಟಿ, ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ ಶ್ಲಾಘಿಸಿದ್ದಾರೆ.


