ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ; ರಸ್ತೆ ಅಡ್ಡಗಟ್ಟಿ 38 ಲಕ್ಷ ದೋಚಿದ್ದ ಗ್ಯಾಂಗ್ ನ ನಾಲ್ವರು ಆರೋಪಿಗಳ ಬಂಧನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಜಿಲ್ಲೆಯ ಶಿವಮೊಗ್ಗ-ಹರಿಹರ ರಸ್ತೆಯ ಕೊಮಾರನಹಳ್ಳಿ ಅರಣ್ಯ ಬಳಿ ಓಮ್ನಿ ಅಡ್ಡಗಟ್ಟಿ 38 ಲಕ್ಷ ಸುಲಿಗೆ ನಡೆಸಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಎರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾವಣಗೆರೆ: ಮರ ಕಡಿಯುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ..!

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಮಾಲತೇಶ ಎಂಬುವವರ ಓಮ್ನಿ ಕಾರು ಅಡ್ಡಗಟ್ಟಿ 38 ಲಕ್ಷ ದೋಚಲಾಗಿತ್ತು.ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮೆಹಬೂಬ್, ಹನುಮಂತಪ್ಪ ಅಲಿಯಾಸ್ ಜಂಗ್ಲಿ, ದಾವಣಗೆರೆಯ ವಿ. ಅಜ್ಜಪ್ಪ ಅಲಿಯಾಸ್ ಅಜಯ್, ಅನಿಲ್ ಬಿ.ಬಂಧಿತ ಆರೋಪಿಗಳು.

ದಾವಣಗೆರೆ: ಈ ಏರಿಯಾದಲ್ಲಿ ಸಂ‌.4ಗಂಟೆ ವರೆಗೆ ವಿದ್ಯುತ್ ವ್ಯತ್ಯಯ

ಆರೋಪಿಗಳಿಂದ ಕೃತ್ಯಕ್ಕೆ ಸಂಬಂಧಿಸಿದ ₹ 23,30,000 ನಗದು, ₹ 6 ಲಕ್ಷ ಮೌಲ್ಯದ 1 ಕಾರು ಮತ್ತು ₹ 70,000 ಮೌಲ್ಯದ 3 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಎಸ್ಪಿ ಎಚ್‌.ಟಿ. ಶೇಖರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ‌ ನೀಡಿದ್ದಾರೆ.

ಘಟನೆ ನಡೆದಿದ್ದು ಹೇಗೆ..?

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಮಾಲತೇಶ ಅವರು ಇದೇ ಮಾರ್ಚ್‌ ತಿಂಗಳಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ಜಮೀನು ಮಾರಾಟ ಮಾಡಿದ ಹಣವನ್ನು ತೆಗೆದುಕೊಂಡು ತಮ್ಮ ಸ್ನೇಹಿತನೊಂದಿಗೆ ರಾತ್ರಿ ಓಮ್ನಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಕೊಮಾರನಹಳ್ಳಿ ಕಣಿವೆ ಬಳಿ ವಾಹನ ಅಡ್ಡಗಟ್ಟಿ ಹೆದರಿಸಿದ್ದ ಆರೋಪಿಗಳು ₹ 38 ಲಕ್ಷ ನಗದಿದ್ದ ಬ್ಯಾಗ್ ಅನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು.

ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಪೊಲೀಸರ 3 ತಂಡಗಳನ್ನು ರಚಿಸಲಾಗಿತ್ತು.ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಉಸ್ತುವಾರಿಯಲ್ಲಿ ಹೊನ್ನಾಳಿ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್. ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಅಧಿಕಾರಿಗಳು, ನಂತರ ತಾಂತ್ರಿಕ ಸಹಾಯದಿಂದ ಪತ್ತೆ ಕಾರ್ಯ ನಡೆಸಿದ್ದರು. ಜಮೀನು ಮಾರಾಟ ಮಾಡಲು ಸಹಕರಿಸಿದ್ದ ಬ್ರೋಕರ್ ಮೆಹಬೂಬ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತರೊಂದಿಗೆ ಸೇರಿ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿಧದಾನೆ.

ಪಿಎಸ್‍ಐಗಳಾದ ಹೊಳಬಸಪ್ಪ ಹೋಳಿ, ಪ್ರಭು ಡಿ. ಕೆಳಗಿನಮನಿ, ಎಎಸ್‍ಐಗಳಾದ ಹರೀಶ್ ಎಚ್.ವಿ., ತೀರ್ಥಲಿಂಗಪ್ಪ, ಅಶೋಕ್‍ರೆಡ್ಡಿ, ಸಿಬ್ಬಂದಿಯಾದ ರುದ್ರೇಶ, ರಾಜಶೇಖರ ಎ.ಬಿ., ರವಿ ಎನ್., ಅಮ್ಜದ್ ಖಾನ್, ಬಸವರಾಜ್ ಕೋಟೆಪ್ಪನವರ್, ಚಂದ್ರಶೇಖರಪ್ಪ ಎ.ಕೆ., ಮಾರುತಿ ಯು., ಧರ್ಮಪ್ಪ, ಹೇಮನಾಯ್ಕ, ಇಬ್ರಾಹಿಂ ಮನ್ನಾ ಖಾನ್, ಶಿವರಾಜ ಎಸ್., ಆನಂದ, ಚನ್ನಕೇಶವ, ರಾಮಚಂದ್ರಪ್ಪ, ವಿರೇಶ, ಹನುಮಂತ, ಮೌನೇಶಾಚಾರಿ, ಚೇತನ್ ಎಸ್., ಮಹೇಂದ್ರ, ಮೂರ್ತಿ, ಪ್ರವೀಣ, ರಂಗಪ್ಪ, ಏಕಾಂತ, ಮನೋಹರ, ಮಹೇಶ, ರಾಘವೇಂದ್ರ, ವೆಂಕಟೇಶ, ರಘು, ರಾಮಚಂದ್ರ ಜಾಧವ್, ಶಿವಕುಮಾರ, ಸಿದ್ದಾರ್ಥ, ಶ್ವಾನದಳದ ಶಫಿಉಲ್ಲಾ ತಂಡದ ಭಾಗವಾಗಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *