ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-2ರ ವ್ಯಾಪ್ತಿಯ ಯರಗುಂಟೆ, ಶಿವಾಲಿ, ಶಿವನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಮಾರ್ಗಗಳ ವ್ಯಾಪ್ತಿಯಲ್ಲಿ ಬೆಸ್ಕಾಂ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಜೂನ್ 06 ರಂದು ಬೆಳಿಗ್ಗೆ 10:00 ರಿಂದ ಸಂಜೆ 4:00 ಗಂಟೆಯವರೆಗೆ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಾವಣಗೆರೆ: ಮರ ಕಡಿಯುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ..!
ಬಿಸ್ಮಿಲ್ಲಾ ನಗರ , ಎಲ್ ಬಿ ಎಸ್ ನಗರ , ಎಸ್ಎಸ್ಎಂ ನಗರ , ಬಿ ಡಿ ಕಾರ್ಮಿಕರ ಬಡಾವಣೆ , ಶಿವ ನಗರ , ಮಿಲತ್ ಕಾಲೋನಿ , ಅಜಾದ್ ನಗರ , ಎಸ್.ಟಿ.ಪಿ ಪ್ಲಾಂಟ್ ಸುತ್ತಮುತ್ತಲ ಪ್ರದೇಶಗಳು, ಭಾಷಾ ನಗರ , ಮಂಡಕ್ಕಿ ಬಟ್ಟಿ, ಚೌಡೇಶ್ವರಿ ನಗರ , ಗಾಂಧಿ ನಗರ , ಬಿ ಏನ್ ಲೇಔಟ್ -1, ಎಸ್.ಪಿ.ಎಸ್ ನಗರ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ದಾವಣಗೆರೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ.
ಜಗಳೂರು ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 06 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಕೆವಿ ಬಿಳಿಚೋಡು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದ ಮಾರ್ಗಗಳಲ್ಲಿ ಮುಚ್ಚುನೂರು ಎನ್ಜೆವೈ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ , ಎಫ್-01 ಗುತ್ತಿದುರ್ಗ, ಎಫ್-02 ಹಾಲೇಕಲ್ಲು, ಎಫ್-05 ಚಿಕ್ಕರಕೆರೆ, ಎಫ್-09 ಮೆದಕೆರನಹಳ್ಳಿ ಮತ್ತು ಎಫ್-10 ಎನ್.ಆರ್.ಪುರ 11ಕೆವಿ ಅಗ್ರಿ ಮಾರ್ಗಗಳಿಗೆ ಬೆಳಗ್ಗೆ 10:00 ಗಂಟೆಯ ಒಳಗಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಜಗಳೂರು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.


