ದಾವಣಗೆರೆ: ಕೆಲ ದಿನಗಳ ಹಿಂದೆಷ್ಟೇ ಪರಿಚಯವಾಗಿದ್ದ ಯುವತಿ ಮೂಲಕ ಯುವಕನನ್ನು ನಗರದ ಹೊರ ವಲಯಕ್ಕೆ ಕರೆಸಿಕೊಂಡ ಗ್ಯಾಂಗ್, ಯುವಕನ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಗ್ಯಾಂಗ್ ಅನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, 18.80 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ: ಸಿಡಿಲು ಬಡಿದು ಕುರಿಗಾಹಿ ಯುವಕ ಸಾ*ವು
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಐವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು
ಬಂಧಿಸಿದ್ದಾರೆ. ಪಂಚಮಿ ಅಲಿಯಾಸ್ ಪೂಜಾ ಅಲಿಯಾಸ್ ಸಮೀನಾ (29), ಸುರೇಶ್ (34), ಜಗದೀಶ(35), ಗಂಗಾ ಅಲಿಯಾಸ್ ಮಲ್ಲೇಶ್ ನಾಯ್ಕ (25), ವೆಂಕಟೇಶ್ (30) ಬಂಧಿತ ಆರೋಪಿಗಳು.
ಮನೆದೇವರು, ಶಾಮನೂರು ಶಿವಶಂಕರಪ್ಪ ಹೆಸರನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್
ಅಭಿಷೇಕ್ ಎಂಬುವವರಿಗೆ ಇತ್ತೀಚಿಗೆ ಪರಿಚಯವಾಗಿದ್ದ ಪಂಚಮಿ ಯುವತಿ ಮೇ. 9 ರಂದು ರಾತ್ರಿ “ಸ್ವಲ್ಪ ಮಾತನಾಡೋದಿದೆ ಬಾ” ಎಂದು ಹರಿಹರ ರಸ್ತೆಯ ಹಳೇಬಾತಿ ಬಳಿಯ ಶಿವನಹಳ್ಳಿ ರಸ್ತೆಗೆ ಕರೆಸಿಕೊಂಡಿದ್ದಳು.
ಇಬ್ಬರೂ ಮಾತನಾಡುತ್ತಿದ್ದ ವೇಳೆ ಹೊಂಚು ಹಾಕಿ ಕುಳಿತಿದ್ದ ತಂಡವು ಇನೋವಾ ಕಾರ್ ಮತ್ತು ಬೈಕ್ನಲ್ಲಿ ಏಕಾಏಕಿ ಸ್ಥಳಕ್ಕೆ ಆಗಮಿಸಿದೆ. ನಮ್ಮ ತಂಗಿಯನ್ನು ಇಲ್ಲಿಗೆ ಏಕೆ ಕರೆದುಕೊಂಡು ಬಂದಿದ್ದೀಯಾ? ಎಂದು ಗಲಾಟೆ ತೆಗೆದು, ಅಭಿಷೇಕ್ ಮೇಲೆ ಹಲ್ಲೆ ನಡೆಸಿ ಬೆದರಿಸಿದ್ದಾರೆ.
ಅಭಿಷೇಕ್ ಧರಿಸಿದ್ದ ಸುಮಾರು 10.20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ ಮತ್ತು ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು. ಪಿಎಸ್ಐ ಪ್ರಭು ಡಿ. ಕೆಳಗಿನಮನಿ ನೇತೃತ್ವದ ತಂಡವು ವಿವಿಧ ಆಯಾಮ
ಗಳಿಂದ ತನಿಖೆ ನಡೆಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಯುವತಿ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ಒಟ್ಟು 18,80,000 ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 80.16 ಗ್ರಾಂ ಚಿನ್ನದ ಒಡವೆಗಳು, ಒಂದು ಇನೋವಾ ಕಾರು, ಒಂದು ಹೋಂಡಾ ಆಕ್ಟಿವಾ ಸ್ಕೂಟರ್ ಸೇರಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಸ್ವತ್ತುಗಳನ್ನು ವಶಪಡಿಸಿಕೊಂಡ ಪಿಎಸ್ಐ ಪ್ರಭು
ಡಿ. ಕೆಳಗಿನ ಮನಿ ಹಾಗೂ ಸಿಬ್ಬಂದಿಗಳಾದ ಮಾರುತಿ, ಬಸವರಾಜ್, ನರೇಂದ್ರ ಸ್ವಾಮಿ, ಮಹಮ್ಮದ್ ಯೂಸೂಫ್ ಅತ್ತಾರ್ ಸೇರಿದಂತೆ ಇಡೀ ತಂಡದ ಕಾರ್ಯವೈಖರಿಯನ್ನು
ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



