ದಾವಣಗೆರೆ: ಭದ್ರಾ ನಾಲೆಯ ನೀರು ಕೊನೆ ಭಾಗದ ರೈತರ ಜಮೀನಿಗೆ ತಲುಪದ ಹಿನ್ನೆಲೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಬಳಿಯ ಕೊಮಾರನಹಳ್ಳಿ ಮುಖ್ಯನಾಲೆಗೆ ಹಾಕಿದ್ದ ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ ನಡೆಸಲಾಯಿತು.
ದಾವಣಗೆರೆ: ಹೂಡಿಕೆ ಮಾಡಿದ್ರೆ ಅಧಿಕ ಲಾಭದ ಆಸೆತೋರಿಸಿ ಮಹಿಳಾ ಟೆಕ್ಕಿಗೆ ಬರೋಬ್ಬರಿ 93 ಲಕ್ಷ ವಂಚನೆ
ರೈತರು ಅಕ್ರಮವಾಗಿ ಹಾಕಿಕೊಂಡಿದ್ದ ಪಂಪ್ ಸೆಟ್ ಗಳನ್ನು ಉಪ ತಹಸೀಲ್ದಾರ್ ಆರ್. ರವಿ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.ಜಿಲ್ಲಾಡಳಿತದ ಮಾರ್ಗಸೂಚಿಯಂತೆ ನಡೆದ ಕಾರ್ಯಾಚರಣೆನಡೆದಿದೆ. ಕಂದಾಯ, ಪೊಲೀಸ್, ಬೆಸ್ಕಾಂ ಹಾಗೂ ಜಲಸಂಪನ್ಮೂಲ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಇನ್ಮುಂದೆ ಪಹಣಿ ಜತೆಗೆಯೇ ಸ್ಕೆಚ್, ಆಕಾರ್ ಬಂದ್, ಮ್ಯುಟೇಷನ್ ಸೇರಿ ಸಮಗ್ರ ದಾಖಲೆ ನೀಡುವ ಭೂ ಆಧಾರ್ ಜಾರಿ
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗಕ್ಕೆ ನೀರು ತಲುಪಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ ಕೆಲ ರೈತರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಮೇಲ್ಭಾಗದಲ್ಲಿ ತೋಟದ ಬೆಳೆಗಾರರು ರಾಜಾರೋಷವಾಗಿ ಹಲವಾರು ವರ್ಷಗಳಿಂದ ನೂರಾರು ಪಂಪ್ ಅಳವಡಿಸಿಕೊಂಡಿದ್ದಾರೆ. ಅವುಗಳನ್ನು ಮೊದಲು ತೆರವು ಮಾಡಿ, ನಂತರ ಕೊನೆಭಾಗಕ್ಕೆ ಬನ್ನಿ ಎಂದು ಹರಿಹಾಯ್ದರು. ಯಾವುದೇ ಪಂಪ್ , ಪೈಪ್, ಪ್ಯಾನಲ್ ಬೋರ್ಡ್ ಜಪ್ತಿ ಮಾಡಿಲ್ಲ, ಕೇಬಲ್ ಮತ್ತು ಪೈಪ್ ಗಳನ್ನು ಮಾತ್ರ ತುಂಡರಿಸಲಾಗಿದೆ ಎಂದು ತಿಳಿಸಿದರು. ಜಲ ಸಂಪನ್ಮೂಲ ಇಲಾಖೆ ಎಇಇ ಕೃಷ್ಣಮೂರ್ತಿ, ಬೆಸ್ಕಾಂ ಶಾಖಾಧಿಕಾರಿ ಮೇಘರಾಜ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ ಮತ್ತು ಸಿಬ್ಬಂದಿ, ನೀರುಗಂಟಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



