ದಾವಣಗೆರೆ: ಈಗಷ್ಟೇ ಇಂಜಿನಿಯರಿಂಗ್ ಮುಗಿಸಿದ ಯುವತಿ ಲೌಕಿಕ ಜೀವನ ತ್ಯಜಿಸಿ ಆಧ್ಯಾತ್ಮದಡೆ ಒಲವು ಹೊಂದಿದ್ದಾರೆ. ನಾಳೆ (ಫೆ.6) ಸಂನ್ಯಾಸತ್ವ ಸ್ವೀಕಾರ ಕಾರ್ಯ ನಡೆಯಲಿದೆ.
ಐತಿಹಾಸಿಕ ಮೈಲಾರಲಿಂಗೇಶ್ವರ ಕಾರಣಿಕ; ಸಂಪಾದಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದ ಗೊರವಯ್ಯ
ದಾವಣಗೆರೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅಂಚಲ್ ಕುಮಾರಿ ಸಂನ್ಯಾಸತ್ವ ಸ್ವೀಕಾರ ಮಾಡಲಿದ್ದಾರೆ. ದಾವಣಗೆರೆ ಬಿಐಇಟಿ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದರು. ಆದರೆ, ಈಗ ಲೋಕಿಕ ಜೀವನ ಬದಲಿಗೆ ಅಲೌಕಿಕ ಜೀವನ ಆಯ್ಕೆ ಮಾಡಿಕೊಂಡಿದ್ದಾರೆ.
ದಾವಣಗೆರೆ: ಏರುತ್ತಲೇ ಇಲ್ಲ ಅಡಿಕೆ ಬೆಲೆ; ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ…?
ಅಂಚಲ್ ಕುಮಾರಿ (26) ದಾವಣಗೆರೆಯ ಚೌಕಿಪೇಟೆಯ ನಿವಾಸಿಗಳಾದ ಮುಖೇಶ್ ಮತ್ತು ಸುನಿತಾ ಬಾಯಿ ದಂಪತಿಯ ಮೂರನೇ ಪುತ್ರಿಯಾಗಿದ್ದಾರೆ. ಅಂಚಲ್ ಅವರ ಅಕ್ಕಂದಿರಿಗೆ ಮದುವೆಯಾಗಿದೆ. ಅಂಚಲ್ ಕೂಡ ಇಂಜಿನಿಯರಿಂಗ್ ಮುಗಿಸಿದ್ದರು. ಕಾಲೇಜು ದಿನಗಳಲ್ಲಿಯೇ ಈ ಅಂಚಲ್ ಅವರಿಗೆ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವಿತ್ತು. ಅವರಿಗೆ ಸಂನ್ಯಾಸತ್ವಕ್ಕೆ ಬಹಳ ಪ್ರಭಾವ ಬೀರಿತ್ತು ಎನ್ನಲಾಗುತ್ತಿದೆ.
ತನ್ನ ಹೆತ್ತವರು, ಒಡಹುಟ್ಟಿದವರು ಹಾಗೂ ಆಸ್ತಿ ಪಾಸ್ತಿಯನ್ನು ತ್ಯಜಿಸಿ ಅಂಚಲ್ ಕುಮಾರಿ ನಾಳೆ ಅಂದ್ರೆ ಶುಕ್ರವಾರ ಗುಜರಾತ್ ನ ಸೂರತ್ ನಲ್ಲಿ ಅಧಿಕೃತವಾಗಿ ಸಂನ್ಯಾಸತ್ವದ ದೀಕ್ಷೆ ಪಡೆಯಲಿದ್ದಾರೆ. ಇಂಜಿನಿಯರಿಂಗ್ ನಲ್ಲಿ ಟಾಪರ್ ಯುವತಿ ಸಂನ್ಯಾಸತ್ವ ಸ್ವೀಕರಿಸಲು ಮುಂದಾಗಿರುವುದು ಜನಸಾಮಾನ್ಯರಿಗೆ ಅಚ್ಚರಿ ಮೂಡಿಸಿದೆ.



