ದಾವಣಗೆರೆ: ಬಾರ್ ಕಳ್ಳತನ ಮಾಡುತ್ತಿದ್ದ 7 ಆರೋಪಿಗಳನ್ಬು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಟೋ, ಮದ್ಯ ಸಹಿತ ಒಟ್ಟು 3.35 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಮಧ್ಯ ಕರ್ನಾಟಕದ ದಾವಣಗೆರೆ ಈಗ ರಿಪಬ್ಲಿಕ್ ಆಫ್ ದಾವಣಗೆರೆ; ಬಿಜೆಪಿ ಕಿಡಿ
ಜಿಲ್ಲೆಯ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹದಡಿ ಗ್ರಾಮದ ಪ ಮಂಜಪ್ಪ ಎಂ. ಜ.26 ರಂದು ತಮ್ಮ ಬಾರ್ ಕಳ್ಳತನವಾದ ಬಗ್ಗೆ ಹದಡಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಿ.ಎಸ್ ಬಸವರಾಜ್ ಮಾರ್ಗದರ್ಶನದಲ್ಲಿ ಮತ್ತು ಮಾಯಕೊಂಡ ವೃತ್ತ ಕಚೇರಿಯ ಸಿ.ಪಿ.ಐ ರಾಘವೇಂದ್ರ ಮಾರ್ಗದರ್ಶನದಲ್ಲಿ ಹದಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನೋಳಗೊಂಡ ಪೊಲೀಸ್ ತಂಡ ಫೆ.1 ರಂದು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 02 ಪ್ರಕರಣಗಳಲ್ಲಿ ಆರೋಪಿತರಿಂದ ಸ್ವತ್ತನ್ನು ಜಪ್ತಿ ಮಾಡಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾವಣಗೆರೆ: ಜಮೀನು ಒತ್ತುವರಿ ವಿಚಾರಕ್ಕೆ ತಮ್ಮನನ್ನೇ ಕೊಲೆಗೈದ ಅಣ್ಣ…!
ಆರೋಪಿಗಳು
1) ಅಜ್ಜಯ್ಯ @ ಗುಂಗರಿ ಅಜಯ ( 23ವರ್ಷ) ಹಾಸ್ಪಟಿಲ್ನಲ್ಲಿ ಕೆಲಸ ವಾಸ ಮನೆ
ಎಸ್ಪಿಎಸ್ ನಗರ, ದಾವಣಗೆರೆ ಟೌನ್
2) ಪರಶುರಾಮ @ ರಾಮೇಶ ( 21) ಕೂಲಿ ಕೆಲಸ ವಾಸ ನಿಟ್ಟೂರು ಗ್ರಾಮ,ಹರಿಹರ ತಾಲ್ಲೂಕು
3) ಅರುಣ @ ಸ್ಯಾಂಸಂಗ್ ಅರುಣ (23) ಹೋಟೆಲ್ ವೇಸ್ಟೇಜ್ ತುಂಬುವ
ಕೆಲಸ ವಾಸ ಗಾಂಧಿನಗರ, ದುರಗಮ್ಮ ದೇವಸ್ಥಾನದ ಮುಂಭಾಗ ದಾವಣಗೆರೆ
4) ಅಣ್ಣಪ್ಪ @ ಅಣ್ಣಪ್ಪ ಲೆಕ್ಕಪ್ಪ ಮಾದರ್ ತಂದೆ ಲೆಕ್ಕಪ್ಪ, 22 ವರ್ಷ, ಡ್ರೈವಿಂಗ್ ಕೆಲಸ,
ವಿದ್ಯಾನಗರ ಲಾಸ್ಟ್ ಬಸ್ನಿಲ್ದಾಣ, ದಾವಣಗೆರೆ ಟೌನ್
5) ರಾಕೇಶನಾಯ್ಕ @ ರಾಕಿ ( 21) ಪ್ಯಾಸೆಂಜರ್ ಆಟೋ ಡ್ರೈವರ್ ಕೆಲಸ, ಎಸ್ಪಿಎಸ್ ನಗರ ದಾವಣಗೆರೆ
6) ಪ್ರದೀಪ @ ತಂಬೂರಿ ಪ್ರದೀಪ್ (24) ಹಂಸಾಗರ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲ್ಲೂಕು ವಿಜಯನಗರ ಹಾಲಿ ವಾಸ ಚಿಕ್ಕಬೂದಿಹಾಳ್, ಬಿಎಂ2 ಕಾಲೋನಿ ಹಿಂಬಾಗ
ದಾವಣಗೆರೆ ತಾಲ್ಲೂಕು.
7) ಸುದೀಪ್ @ ಈಶ ( 20) ಜೈನ್ ಬಜಾಜ್ ಶೋರೂಂನಲ್ಲಿ ಮೆಕ್ಯಾನಿಕ್ ಕೆಲಸ ವಾಸ ಎಸ್,ಪಿ,ಎಸ್ ನಗರ ಬೂದಾಳ್ ರೋಡ್ ದಾವಣಗೆರೆ ಟೌನ್ .
ವಶಪಡಿಸಿಕೊಂಡ ಸ್ವತ್ತು
ಹದಡಿ ಪೊಲೀಸ್ ಠಾಣೆಯ 01 ಪ್ರಕರಣ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 01 ಪ್ರಕರಣಗಳಲ್ಲಿ ಒಟ್ಟು 135,840/- ರೂ. ಬೆಲೆಯ ಮಧ್ಯವನ್ನು ಹಾಗೂ ಆರೋಪಿತರ ಕಳ್ಳತನ ಮಾಡಲು ಬಳಸುತ್ತಿದ್ದ ಅಂದಾಜು 2,00,000/- ರೂ. ಬೆಲೆಯ ಬಜಾಜ್ ಮ್ಯಾಕ್ಸಿಮ ಪ್ಯಾಸೆಂಜರ್ ಆಟೋ ಸೇರಿ 3.58 ಲಕ್ಷದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



