ದಾವಣಗೆರೆ: ಇತ್ತೀಚೆಗೆ ನವದೆಹಲಿಯ NCRB ಯ CFPB ವತಿಯಿಂದ ನಡೆದ 26ನೇ ಅಖಿಲ ಭಾರತ ಬೆರಳು ಮುದ್ರೆ ನಿರ್ದೇಶಕರ ಸಮ್ಮೇಳನದಲ್ಲಿ ಅತ್ಯುತ್ತಮ ಪತ್ತೆ ಪ್ರಕರಣ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದೆ.
ಸಮ್ಮೇಳನದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಿ ಪ್ರಥಮ ಸ್ಥಾನ ಪಡೆಯಲು ಕಾರಣರಾದ ಡಿವೈಎಸ್ಪಿ ರುದ್ರೇಶ.ಎ.ಕೆ ಅವರನ್ನು ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ. ಆರ್ ರವಿಕಾಂತೇಗೌಡ, ಎಸ್ಪಿ ಶೇಖರ್ ಹೆಚ್ ಟಿ. ಅಭಿನಂದಿಸಿ ಸನ್ಮಾನಿಸಿದರು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರ ರಕ್ತಸಿಕ್ತ ಆಕಸ್ಮಿಕ ಮುದ್ರೆಯಿಂದ ಆರೋಪಿ ಪತ್ತೆ ಮಾಡಿದ್ದು, ಸದರಿ ಪ್ರಕರಣದಲ್ಲಿ ವಿಚಾರಣೆ ನಡೆದು ಆರೋಪಿಗಳಿಗೆ ಘನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುತ್ತದೆ. ಈ ಪ್ರಕರಣವು 26ನೇ ಅಖಿಲ ಭಾರತ ಬೆರಳು ಮುದ್ರೆ ನಿರ್ದೇಶಕರ ಸಮ್ಮೇಳನಕ್ಕೆ ಅತ್ಯುತ್ತಮ ಪತ್ತೆ ಪ್ರಕರಣ ವಿಭಾಗದಲ್ಲಿ ಆಯ್ಕೆಯಾಗಿದ್ದು, ಈ ಪ್ರಕರಣದ ವಿವರವಾದ ಮಾಹಿತಿಯನ್ನು ಡಿವೈಎಸ್ಪಿ, ಬೆರಳು ಮುದ್ರೆ ಸಂಗ್ರಹಾಲಯ ಪೂರ್ವ ವಲಯ ದಾವಣಗೆರೆಯ ರುದ್ರೇಶ.ಎ.ಕೆ ಅತ್ಯುತ್ತಮವಾಗಿ ಪ್ರಸ್ತುತಪಡಿಸಿದ ಪರಿಣಾಮ ಅಖಿಲ ಭಾರತ ಮಟ್ಟದಲ್ಲಿ ಅತ್ಯುತ್ತಮ ಪತ್ತೆ ಪ್ರಕರಣ ವಿಭಾಗದಲ್ಲಿ “ಪ್ರಥಮ ಸ್ಥಾನ” ಪಡೆದಿದೆ.


