ದಾವಣಗೆರೆ: ಅಮಾನತುಗೊಂಡಿದ್ದ ಮಹಾನಗರ ಪಾಲಿಕೆಯ ವರ್ಕ್ ಇನ್ಸ್ಪೆಕ್ಟರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಗರದ ಶಕ್ತಿ ನಗರ ಸಮೀಪದ ರೈಲ್ವೆ ಹಳಿ ಬಳಿ ಈ ಘಟನೆ ನಡೆದಿದೆ. ನಿಟುವಳ್ಳಿಯ ವಾಸಿಯಾದ ಪಾಲಿಕೆಯ ತಾಂತ್ರಿಕ ಶಾಖೆ ವರ್ಕ್ ಇನ್ಸ್ಪೆಕ್ಟರ್ ಟಿ.ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡ ನೌಕರ. ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಲಕ್ಷ್ಮಣ್ ಬಾಷಾ ನಗರ, ಅಹಮ್ಮದ್ ನಗರ ಭಾಗದಲ್ಲಿ ಪಾಲಿಕೆ ತಾಂತ್ರಿಕ ಶಾಖೆಯ ವರ್ಕ್ ಇನ್ಸ್ಪೆಕ್ಟರ್ ಆಗಿದ್ದರು. 8-10 ತಿಂಗಳ ಹಿಂದೆ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.ಲಕ್ಷ್ಮಣ್ ಅವರಿಗೆ ಪಾಲಿಕೆ ವೇತನ ಸಹ ನಿಲ್ಲಿಸಲಾಗಿತ್ತು.ಇದರಿಂದ ನೊಂದ ಲಕ್ಷ್ಮಣ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



