ದಾವಣಗೆರೆ ಜನರೇ ಎಚ್ಚರ; ಸರ್ಕಾರದಿಂದ ಪರವಾನಗಿ ಪಡೆಯದ ಈ 31 ಚಿಂಟ್ ಫಂಡ್ ಸಂಸ್ಥೆಗಳೊಂದಿಗೆ ವ್ಯವಹಾರ ಮಾಡದಂತೆ ಸೂಚನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಚಿಟ್ ಫಂಡ್ ನಡೆಸುತ್ತಿರುವ ಸುಮಾರು 31 ಚೀಟ್ ಫಂಡ್ ಸಂಸ್ಥೆಗಳು ಇಲಾಖೆಯಿಂದ ಪರವಾನಗಿ ಪಡೆದಿರುವುದಿಲ್ಲ. ಹೀಗಾಗಿ ಈ ಕೆಳಗಿನ 31 ಚಿಂಟ್ ಫಂಡ್ ಸಂಸ್ಥೆಗಳೊಂದಿಗೆ ಸಾರ್ವಜನಿಕರು ವ್ಯವಹಾರ ಮಾಡದಂತೆ ಸಹಕಾರ ಸಂಘಗಳ ಉಪನಿಬಂಧಕಿ ಹೆಚ್.ಅನ್ನಪೂರ್ಣ  ಎಚ್ಚರಿಕೆ ನೀಡಿದ್ದಾರೆ.

ಸಂಸ್ಥೆಯ ಹೆಸರು: ಶ್ರೀರಾಮ ಚಿಟ್ಸ್ ಪ್ರೈ ಲಿ., ಕಪಿಲ್ ಚಿಟ್ಸ್ ಪ್ರೈ ಲಿ, ದಾವಣಗೆರೆ, ಶ್ರೀ ಕರಾಯಿಲ್ ಚಿಟ್ಸ್ (ಇಂಡಿಯಾ) ಲಿ. ತಿರುಪುರ ತಮಿಳುನಾಡು ಶಾಖೆ ದಾವಣಗೆರೆ, ಸ್ಥರ ಚಿಟ್ ಫಂಡ್ಸ್ ಪ್ರೈ ಲಿ., ಚೇತನಾ ಚಿಟ್ಸ್ ಹಾವೇರಿ ಪ್ರೈ ಲಿ, ದಾವಣಗೆರೆ., ಹೊಯ್ಸಳ ಚಿಟ್ ಫಂಡ್ಸ್ (ರಿ), ಸಿದ್ದೇಶ್ವರ ಚಿಟ್ಸ್ (ರಿ) ಈರುಳ್ಳಿ ಮಾರ್ಕೆಟ್ ಹತ್ತಿರ ದಾವಣಗೆರೆ., ನಯನ ಚಿಟ್ಸ್ ಫಂಡ್ ದಾವಣಗೆರೆ. ಶಶಿಕಿರಣ್ ಚಿಟ್ ಫಂಡ್ಸ್ ಪ್ರೈ ಲಿ., ಚಿಲುಕೂರಿ ಚಿಟ್ಸ್ (ಇಂಡಿಯಾ)ಪ್ರೈ.ಲಿ., ಚನ್ನಪ್ಪ ಚಿಟ್ ಫಂಡ್ಸ್(ರಿ)., ಅಭಿವೃದ್ಧಿ ಚಿಟ್ ಫಂಡ್ಸ್ (ರಿ)., ಶ್ರೀಮಂಜುನಾಥ ಚಿಟ್ ಫಂಡ್ಸ್(ರಿ)., ಎಸ್.ಆರ್.ಕೆ ಚಿಟ್ ಫಂಡ್ಸ್(ರಿ).,ಸಮೃದ್ದಿ ಚಿಟ್ ಫಂಡ್ಸ್.,ಸೇವಾಲಾಲ್ ಚಿಟ್ ಫಂಡ್ಸ್(ರಿ)., ಎಸ್.ಎಸ್.ವಿ ಚಿಟ್ ಫಂಡ್ಸ್(ರಿ)., ಜಿ-1 ಚಿಟ್ಸ್ ಕರ್ನಾಟಕ(ರಿ)., ಶ್ರೀದುರ್ಗಾ ಚಿಟ್ ಫಂಡ್ಸ್., ಎಸ್.ಎಂ.ಜೆ ಚಿಟ್ ಫಂಡ್ಸ್(ರಿ)., ಶ್ರೀಕೃಷ್ಣ ಚಿಟ್ ಫಂಡ್ಸ್(ರಿ)., ಶ್ರೀವಿನಯ ಚಿಟ್ಸ್ ಫಂಡ್ಸ್(ರಿ)., ಕೆ.ಬಿ.ಎಸ್ ಶ್ರೀಅದೃಷ್ಠ ಚಿಟ್ ಫಂಡ್ಸ್(ರಿ)., ಶ್ರೀನಿಮಿಷಾಂಬಾ ಚಿಟ್ ಫಂಡ್ಸ್ (ರಿ).,ಶ್ರೀಕುಬೇರ ಚಿಟ್ಸ್ ಫಂಡ್ಸ್(ರಿ).,ಶ್ರೀಕಲ್ಲೇಶ್ವರ ಚಿಟ್ಸ್ (ಕ) ಪ್ರೈ ಲಿ. ಪಾಪರೆಡ್ಡಿ ಪಾಳ್ಯ ನಾಗರಭಾವಿ ಬೆಂಗಳೂರು., ಸಿದ್ದಿ ವಿನಾಯಕ ಚಿಟ್ ಫಂಡ್ಸ್(ರಿ)., ಅಪೂರ್ವ ಚಿಟ್ ಫಂಡ್ಸ್(ರಿ)., ಭಾಗ್ಯೋದಯ ಚಿಟ್ ಫಂಡ್ಸ್(ರಿ) ಈ ಸಂಸ್ಥೆಯವರು ನಿಯಮಾನುಸಾರ ಅನುಮತಿ ಪಡೆದಿರುವುದಿಲ್ಲ.

ಮೇಲಿನ ಸಂಸ್ಥೆಯವರು ಚಿಟ್ಸ್ ಫಂಡ್ ನಡೆಸುವುದಾದರೆ ಅಗತ್ಯ ದಾಖಲೆಗಳೊಂದಿಗೆ 15 ದಿನಗಳೊಳಗಾಗಿ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಜಿಲ್ಲಾಡಳಿತ ಭವನ, ದಾವಣಗೆರೆ ಇವರಿಗೆ ತಮ್ಮ ಮನವಿಯನ್ನು ಸಲ್ಲಿಸಬಹುದು. ತಪ್ಪಿದಲ್ಲಿ, ಚೀಟಿ ನಿಧಿಗಳ ಕಾಯ್ದೆಯಡಿ ಚೀಟಿ ವ್ಯವಹಾರ ಮಾಡಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಕೇಂದ್ರ ಕಚೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *