ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಮಹಾ ಅಧಿವೇಶನ ಇಂದಿನಿಂದ (ಡಿ. 23 ಮತ್ತು 24) ರ ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮಹಾ ಅಧಿವೇಶನಕ್ಕೆ ಸಲಕ ಸಿದ್ಧತೆ ಕೈಗೊಳ್ಳಲಾಗಿದ್ದು,ಅಧಿವೇಶನವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗಿಯಾಗಲಿದ್ದಾರೆ.
ಎಸ್. ನಿಜಲಿಂಗಪ್ಪರ ವೇದಿಕೆಯಲ್ಲಿ 23ರಂದು ಮಧ್ಯಾಹ್ನ 12.30ರಿಂದ 2.30ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಿರಿಗೆರೆಯ ತರಳಬಾಳು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗಾ ಮಹಾಸ್ವಾಮೀಜಿ,ಹುಬ್ಬಳ್ಳಿಯ ಮೂರು ಸಾವಿರ ಸಂಸ್ಥಾನ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಗದಗ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವರು ಹಾಗೂ ಮಹಾಸಭಾದ ಗೌರವಾಧ್ಯಕ್ಷ ಡಾ. ಭೀಮಣ್ಣ ಖಂಡ್ರೆ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶ್ರೀ ಶಿವಕುಮಾರ ಮಹಾಮಂಟಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಎಸ್. ನಿಜಲಿಂಗಪ್ಪ ವೇದಿಕೆ, ಸಚಿವ ಎಂ. ಬಿ. ಪಾಟೀಲ್ ಅವರು ಜೆ. ಹೆಚ್. ಪಟೇಲ್ ವೇದಿಕೆಯ ಉದ್ಘಾಟನೆ ನೆರವೇರಿಸುವರು. ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ. ಜಿ. ಶಾಂತನಗೌಡ, ಬಿ. ಪಿ. ಹರೀಶ್, ಬಿ. ಕೆ. ಸಂಗಮೇಶ್ವರ, ಬಸವರಾಜು ವಿ. ಶಿವಗಂಗಾ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್. ಎಸ್. ಗಣೇಶ್ ಆಗಮಿಸುವರು.ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರವರೆಗೆ ಎಸ್. ನಿಜಲಿಂಗಪ್ಪ ವೇದಿಕೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಅಧಿವೇಶನ, ಜೆ. ಹೆಚ್. ಪಟೇಲ್ ವೇದಿಕೆಯಲ್ಲಿ ಮಧ್ಯಾಹ್ನ 3. 30ರಿಂದ ಸಂಜೆ 5. 30ರವರೆಗೆ ಶೈಕ್ಷಣಿಕ ಅಧಿವೇಶನ ನಡೆಯಲಿದೆ.
ಡಿ. 24ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಎಸ್. ನಿಜಲಿಂಗಪ್ಪ ವೇದಿಕೆಯಲ್ಲಿ ಧಾರ್ಮಿಕ ಅಧಿವೇಶನ, ಜೆ. ಹೆಚ್. ಪಟೇಲ್ ವೇದಿಕೆಯಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಹಿಳಾ ಮತ್ತು ಯುವ ಅಧಿವೇಶನ, ಮಧ್ಯಾಹ್ನ 12.15ರಿಂದ2 ಗಂಟೆಯವರೆಗೆ ನಿಜಲಿಂಗಪ್ಪ ವೇದಿಕೆಯಲ್ಲಿ ನೌಕರರ ಅಧಿವೇಶನ, ಜೆ. ಹೆಚ್. ಪಟೇಲ್ ವೇದಿಕೆಯಲ್ಲಿ ಮಧ್ಯಾಹ್ನ 12. 15ರಿಂದ 2 ಗಂಟೆಯವರೆಗೆ ಸಾಹಿತಿಗಳ ಅಧಿವೇಶನ ನಡೆಯಲಿದೆ.
ಸಮಾರೋಪ ಸಮಾರಂಭವು ಡಿ. 24ರಂದು ಮಧ್ಯಾಹ್ನ 3. 30ಕ್ಕೆ ಎಸ್. ನಿಜಲಿಂಗಪ್ಪ ವೇದಿಕೆಯಲ್ಲಿ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರದ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ, ಸಾಣೇಹಳ್ಳಿ ಶ್ರೀಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಆಗಮಿಸಲಿದ್ದಾರೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ರಾಜ್ಯ ಘಟಕದ ಮಹಾಸಭೆಯ ಹಿರಿಯ ಉಪಾಧ್ಯಕ್ಷ ಡಾ. ಎನ್. ತಿಪ್ಪಣ್ಣ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ. ಗೊ. ರು. ಚನ್ನಬಸಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ತಲಾ20 ಆಸನಗಳ ವ್ಯವಸ್ಥೆ ಇದ್ದು, ಅತಿಥಿ, ಗಣ್ಯರು ಅಲ್ಲಿ ಆಸೀನರಾಗಲಿದ್ದಾರೆ. ವಿಶಾಲ ಪೆಂಡಾಲ್ನಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ, ಪೆಂಡಾಲ್ ಕಡೆ ಕೃಷಿಪುಸ್ತಕ, ಅಲಂಕಾರಿಕವಸ್ತುಗಳು, ಕರಕುಶಲ ವಸ್ತುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಗಮನಾರ್ಹ. ಇದಕ್ಕಾಗಿ
ಸಂಘಟಕರು 50-60 ಮಳಿಗೆಗಳ ವ್ಯವಸ್ಥೆ ಮಾಡಿದ್ದಾರೆ. ಇದೀಗ ಐತಿಹಾಸಿದ ಮಹಾಅಧಿವೇಶನಕ್ಕೆ ಕ್ಷಣಗಣನೆ ಶುರುವಾಗಿದೆ.
ವಾಹನಗಳಿಗೆ ಪಾರ್ಕಿಂಗ್, ವಿವಿಧೆಡೆ ಗಣ್ಯರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧೆಡೆಯಿಂದಬಸ್, ಮಿನಿ ಬಸ್, ಟಿಟಿ, ಟ್ರ್ಯಾಕ್ಸ್, ಕಾರು,ಜೀಪುಗಳು ಸೇರಿ ಸಾವಿರಾರು ವಾಹನಗಳ ಅಚ್ಚುಕಟ್ಟಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಎರಡು ದಿನ ಅಧಿವೇಶನಕ್ಕಾಗಿ ಅತಿಥಿ ಗಣ್ಯರು, ಸಮಾಜ ಬಾಂಧವರಿಗೆ ತಂಗಲು, ವ್ಯವಸ್ಥೆ ಮಾಡಲಾಗಿದೆ. ಶಾಲೆ, ಕಾಲೇಜು, ಹಾಸ್ಟೆಲ್ಗಳು, ಲಾಡ್ಜ್ಗಳು, ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಗುರುಗಳ ದೈನಂದಿನ ಪೂಜಾ, ಧಾರ್ಮಿಕ ಆಚರಣೆಗೆ ಯಾವುದೇ ತೊಂದರೆ ಆಗದಂತೆ ಭಕ್ತಾದಿಗಳ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಸುಮಾರು 2-3 ಲಕ್ಷ ಜನಸೇರುವ ನಿರೀಕ್ಷೆ ಇದೆ. ಎಷ್ಟೇ ಜನ ಬಂದರೂ ಸಕಲ ವ್ಯವಸ್ಥೆ ಮಾಡಲಾಗಿದೆ. ಸಮಾಜಬಾಂಧವರ ಊಟೋಪಚಾರಕ್ಕೆ ತೊಂದರೆಯಾಗದಂತೆ, ಅತಿಥಿದೇವೋ ಭವ ಎಂಬಂತೆ ಆತಿಥ್ಯ ನೀಡಲು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸರ್ವ ಸಿದ್ಧತೆಯನ್ನೂ ಮಾಡಿಕೊಂಡಿದೆ.
ಸಮಾಜ ಬಾಂಧವರಿಗೆ ಡಿ.23ರ ಬೆಳಿಗ್ಗೆ ಕೇಸರಿಬಾತ್ – ಉಪ್ಪಿಟ್ಟು, ಟೀ, ಕಾಫಿ,ಹಾಲು, ಮಧ್ಯಾಹ್ನ ಜೋಳದ ರೊಟ್ಟಿ, ಮುಳು ಗಾಯಿ ಪಲ್ಯ, ಗೋಧಿ ಹುಗ್ಗಿ, ಲಾಡು, ಅನ್ನ,ಸಾರು ಮಾಡಲಾಗುತ್ತಿದೆ. ರಾತ್ರಿಗೆ ಬಿಸಿ ಬೇಳೆ ಬಾತು, ಮೊಸರನ್ನ, ಉಪ್ಪಿನಕಾಯಿ ವ್ಯವಸ್ಥೆ ಇದೆ. ನಾಳೆಯಮೆನು:ಡಿ.24 ಬೆಳಿಗ್ಗೆ ತಿಂಡಿಗೆ ದಾವಣಗೆರೆಯ ಪ್ರಸಿದ್ಧಮಂಡಕ್ಕಿ ಉಸುಳಿ, ಮೆಣಸಿನಕಾಯಿ,ಪೊಂಗಲ್, ಚಿತ್ರಾನ್ನ, ಮಧ್ಯಾಹ್ನ ಶ್ಯಾವಿಗೆ ಪಾಯಸ, ಪಲಾವ್, ಮೊಸರು ಬಜ್ಜಿ, ಅನ್ನ ಸಾರು, ರಾತ್ರಿಗೆ ಊಟಕ್ಕೆ ಅನ್ನ ಸಾಂಬಾರು ನೀಡಲು ಸಂಘಟಕರು ನಿರ್ಧರಿಸಿದ್ದಾರೆ. ಮಹಾಧಿವೇಶನದ ಎರಡೂ ದಿನಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ನಿರಂತರ ಅನ್ನ ದಾಸೋಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನೂರಾರು ಬಾಣಸಿಗರು, ಅಡುಗೆ ಸಹಾಯಕರು ಶುಕ್ರವಾರ ಬೆಳಿಗ್ಗೆಯಿಂದಲೇ ಅಡುಗೆ ಸಾಮಾನು ಜೋಡಿಸಿ ರಾತ್ರಿಯೇ ಬೆಳಿಗ್ಗೆ ತಿಂಡಿಗೆ ಸಿದ್ಧತೆಯಲ್ಲಿ ತೊಡಗಿದ್ದು ಕಂಡು ಬಂದಿತು. ಊಟ, ವಸತಿ, ಆತಿಥ್ಯದ ಬಗ್ಗೆ ಅಭಾವೀಮರಾಷ್ಟ್ರೀಯ ಅಧ್ಯಕ್ಷಡಾ.ಶಾಮನೂರು ಶಿವಶಂಕರಪ್ಪ ಹೆಚ್ಚು ಮುತುವರ್ಜಿ ವಹಿಸಿದ್ದು, ಉಪಾಧ್ಯಕ್ಷರಾಗಿ ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ, ಅಥಣಿ ಎಸ್ ವೀರಣ್ಣ,ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್ ಸಹಕರಿಸಿದ್ದಾರೆ.