ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೂಪರ್ ಫ್ಯಾನ್ ಆಗಿದ್ದ ಅಜ್ಜಿ ಇನ್ನಿಲ್ಲ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ನವದೆಹಲಿ: ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್‍ನಲ್ಲಿ ಚಾರುಲತಾ ಪಟೇಲ್ ಎಂಬ 87 ವರ್ಷದ ಅಜ್ಜಿ ಟೀಮ್ ಇಂಡಿಯಾಗೆ ಚೀಯರ್ ಹೇಳಿ ಸಖತ್ ಟ್ರೋಲ್ ಆಗಿದ್ರು.  ಟೀಮ್ ಇಂಡಿಯಾದ ಸೂಪರ್ ಫ್ಯಾನ್  ಆಗಿದ್ದ ಚಾರುಲತಾ ಪಟೇಲ್ ಇನ್ನಿಲ್ಲ.

ಭಾರತ ಮತ್ತು ಬಾಂಗ್ಲಾದೇಶ ಪಂದ್ಯದ  ವೇಳೆ ಸ್ಟೇಡಿಯಂನಲ್ಲಿ ಚಾರುಲತಾ ಅವರು  ಟೀಮ್ ಇಂಡಿಯಾ ಆಟಗಾರಿಗೆ ಚೀಯರ್ ಹೇಳಿದ್ದರು. ಈ ಮೂಲಕ  ಎಲ್ಲರ ಗಮನ ಸೆಳೆದಿದ್ದರು. ಇಳಿ ವಯಸ್ಸಿನಲ್ಲೂ ಟೀಂ ಇಂಡಿಯಾಗೆ ಅವರು ಪ್ರೋತ್ಸಾಹಿಸಿದ ಪರಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದರು.

super fan 2

ಇದು ಕೇವಲ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲ ಟೀ ಇಂಡಿಯಾ ನಾಯಕ ಕಿಂಗ್ ವಿರಾಟ್ ಕೋಹ್ಲಿ, ಪವರ್ ಹಿಟರ್ ರೋಹಿತ್ ಶರ್ಮಾ ಕೂಡ ಚಾರುಲತಾ ಅವರ ಇಳಿ ವಯಸ್ಸಿನಲ್ಲೂ ಪ್ರೀತಿಯ ಪ್ರೋತ್ಸಾಹಕ್ಕೆ ಮನಸೋತ್ತಿದ್ದರು. ಟೀಮ್ ಇಂಡಿಯಾದ ಇಂತಹ ಫ್ಯಾನ್ ಇದೀಗ ವಿಧಿವಶರಾಗಿದ್ದು, ಚಾರುಲತಾ ಅವರ ಮೊಮ್ಮಗಳು ಅವರ ಅಗಲಿಕೆಯ ಸುದ್ದಿಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜ.13ರ ಸಂಜೆ 5:30ರ ಹೊತ್ತಿಗೆ ನಮ್ಮ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಸಣ್ಣ ವಸ್ತುಗಳು ಸಣ್ಣ ಪ್ಯಾಕೆಜ್‍ಗಳಲ್ಲಿ ಬರುತ್ತದೆ ಎಂಬುದು ಸತ್ಯ. ಅವರು ಅಸಾಧಾರಣ. ಅವರು ನಮ್ಮ ಪ್ರಪಂಚ ಎಂದು ಬರೆದು ಪೋಸ್ಟ್ ಮಾಡಲಾಗಿದೆ.

super fan 3

ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಚಾರುಲತಾ ಅವರು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದರು. ಪಂದ್ಯದ ಬಳಿಕ ಚಾರುಲತಾ ಅವರನ್ನು ಭೇಟಿ ಮಾಡಿದ್ದ ಕೊಹ್ಲಿ, ಅವರಿಂದ ಆಶೀರ್ವಾದ ಪಡೆದಿದ್ದರು. ಅಲ್ಲದೇ ಅವರ ಫೋಟೋ ಹಂಚಿಕೊಂಡು’ ಇಷ್ಟೊಂದು ಪ್ರೀತಿ ಹಾಗೂ ಬೆಂಬಲ ತೋರಿದ ಅಭಿಮಾನಿಗಳಿಗೆ ಧನ್ಯವಾದ. ಅದರಲ್ಲೂ ಚಾರುಲತಾ ಪಟೇಲ್ ಅವರಿಗೆ ತುಂಬು ಹೃದಯದ ಧನ್ಯವಾದ ಹೇಳಿದ್ದರು. 87 ವರ್ಷದ ವಯಸ್ಸಿನಲ್ಲೂ ಇಂತಹ ಅಭಿಮಾನವನ್ನು ತೋರಿರುವುದನ್ನು ನಾನು ನೋಡಿಲ್ಲ. ಅವರಿಂದ ಆಶೀರ್ವಾದ ಪಡೆದಿದ್ದೇನೆ ಟ್ವೀಟ್ ಮಾಡಿದ್ದರು.

ಅಜ್ಜಿಯ ಹಿನ್ನೆಲೆ ಏನು?
ಈ ಅಜ್ಜಿ ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಪಡುತ್ತೇನೆ.  ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದ್ದೆ. ಬಳಿಕ 1975ರಿಂದ ತಾಂಜಾನೀಯಾದಲ್ಲಿ ನೆಲೆಸಿದ್ದಾರೆ.

ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದ್ದೇನೆ.  ಕಳೆದ 20 ವರ್ಷದಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ಈ ವಿಶ್ವಕಪ್ ಪಂದ್ಯವನ್ನು ನೇರವಾಗಿ ನೋಡಲು  ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಹೇಳಿದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *