ದಾವಣಗೆರೆ: ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ವಿದ್ಯಾನಗರ ಪೊಲೀಸರು ಬಂಧಿನಿಸಿದ್ದು, ಬಂಧಿತ ಆರೋಪಿಯಿಂದ ಚಿನ್ನಾಭರಣ ಸಹಿತ 34 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮನೆ ಕಳ್ಳತನ ಮಾಡಿದ ಪ್ರಕರಣ ದಾಖಲಾಗಿದ್ದವು.
ತಮಿಳುನಾಡು ರಾಜ್ಯದ ರಾಣೀಪೇಟೆ ಮೂಲದ ಪ್ರಸ್ತುತ ಬೆಂಗಳೂರು ಉತ್ತರಹಳ್ಳಿಯ ಭುವನೇಶ್ವರಿ ನಗರದಲ್ಲಿ ಹಾಲಿ ವಾಸವಿದ್ದ ಮಂಜುನಾಥ ಕಲ್ಕೆರೆ ಆಲಿಯಾಸ್ ಮಂಜಾ ಬಂಧಿತ ಆರೋಪಿ.15.63 ಲಕ್ಷ ರೂ. ಮೌಲ್ಯದ 210 ಗ್ರಾಂ. ವಜ್ರಸಹಿತ ಚಿನ್ನಾಭರಣ ಮತ್ತು ಬಂಗಾರದ ಗಟ್ಟಿ, 13.50 ಲಕ್ಷ ರೂ. ಮೌಲ್ಯದ ಒಂದು ಬ್ರಿಜ್ಜಾ ಕಾರು, ಕೃತ್ಯಕ್ಕೆ ಬಳಸಿದ 4 ಲಕ್ಷ ರೂ. ಬೆಲೆಯ ಸ್ವಿಫ್ಟ್ ಡೀಜರ್ ಕಾರು, 47400 ರೂ. ಮೌಲ್ಯದ ಬೆಳ್ಳಿ ಒಡವೆ, 37 ಸಾವಿರ ರೂ. ಮೌಲ್ಯದ 460 ಅಮೆರಿಕನ್ ಡಾಲರ್ ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪ್ರಭಾರ ಡಿವೈಎಸ್ಪಿ ಯಶವಂತಕುಮಾರ್, ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ, ಪಿಎಸ್ಐ ಜಿ.ಎಂ.ರೇಣುಕ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು ,ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



