ದಾವಣಗೆರೆ; ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಮಳಲ್ಲಿ ಸಮೀಪದ ಭದ್ರಾ ನಾಲೆಯ ಸುರಂಗ ವೀಕ್ಷಿಸಲು ಹೋಗಿದ್ದಾಗ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಮಾವಿನಕಟ್ಟೆ ಗ್ರಾಮದ ನಿವಾಸಿ ಅಭಿಷೇಕ್(28) ಮೃತ ಯುವಕನಾಗಿದ್ದಾನೆ. ಹಿರೇಮಳಲ್ಲಿ ಗ್ರಾಮ ದಲ್ಲಿ ಭದ್ರಾ ನಾಲೆಯ ಸುರಂಗ ಹಾದುಹೋಗಿದ್ದು, ನಾಲೆಯಲ್ಲಿ ನೀರು ಇರಲಿಲ್ಲ, ಹೀಗಾಗಿ ಮೃತ ಅಭಿಷೇಕ್ ಸುರಂಗ ನೋಡಲು ಹೋಗಿದ್ದಾಗ ಈ ಘಟನೆ ನಡೆದಿದೆ. ನಾಲೆಯಿಂದ ನೀರನ್ನು ಮೇಲೆತ್ತಲು ಇಟ್ಟಿದ ಮೋಟಾರ್ ನಿಂದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



