ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮುಸ್ಸೇನಾಳು, ಚಟ್ನಳ್ಳಿ , ಫಲವನಹಳ್ಳಿ ಗ್ರಾಮದಲ್ಲಿ ಚಿರತೆ ಮತ್ತು ಮರಿಗಳು ಸಂಚರಿಸಿದ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟು ಮಾಡಿದೆ.
ಮುಸ್ಸೇನಾಳು ಗ್ರಾಮದ ರೈತ ಕುಮಾರ ನಾಯ್ಕ ಅವರ ಹಸುವಿನ ಕರುವನ್ನು ಚಿರತೆ ಕೊಂದಿದೆ. ಶಿವಮೊಗ್ಗ ಅರಣ್ಯ ಮತ್ತು ಹೊನ್ನಾಳಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಸಂಚರಿಸುತ್ತಿರುವುದು ಗಮನಕ್ಕೆ ಬಂದ ನಂತರ ಚಟ್ನಹಳ್ಳಿ ಭಾಗದಲ್ಲಿ ಚಿರತೆ ಸೆರೆಗೆ ಬೋನು ಇಡಲಾಗಿದೆ. ಜನರು ಜಮೀನುಗಳಿಗೆ ಹೋಗುವಾಗ ಮತ್ತು ರಾತ್ರಿಯ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ತಿಳಿಸಿದೆ.



