ದಾವಣಗೆರೆ: ಅಕ್ರಮವಾಗಿ ಮರಳು ಸಾಗಾಣಿಕೆ ಮೇಲೆ ಪೊಲೀಸರು ದಾಳಿ ಮಾಡಿದ್ದು 03 ಟಿಪ್ಪರ್ ಲಾರಿ, ಒಂದು ಟ್ರಾಕ್ಟರ್ ಟ್ರೈಲರ್, ಜೆಸಿಬಿ ವಾಹನ ಮತ್ತು ಮರಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಹೊನ್ನಾಳಿ ತಾಲ್ಲೂಕು ಬೀರಗೊಂಡನಹಳ್ಳಿ ಗ್ರಾಮದ ಸಮೀಪ ಹಾದುಹೋಗಿರುವ ತುಂಗಭದ್ರಾ ನದಿ ಪಾತ್ರದಲ್ಲಿ ಸಿಗುವಂತಹ ಮರಳನ್ನು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಜೆ.ಸಿ.ಬಿ ಯಂತ್ರದ ಮೂಲಕ ಟಿಪ್ಪರ್ ಲಾರಿಗಳಲ್ಲಿ ಮತ್ತು ಟ್ರಾಕ್ಟರ್ ಟ್ರೈಲರ್ ಗಳಲ್ಲಿ ಸಾಗಾಣಿಗೆ ಮಾಡುತ್ತಿದ್ದ 03 ಟಿಪ್ಪರ್, ಲಾರಿಗಳನ್ನು ಮತ್ತು ಒಂದು ಟ್ರಾಕ್ಟರ್ ಟ್ರೈಲರ್, ಒಂದು ಜೆಸಿಬಿ ವಾಹನ ಮತ್ತು ಮರಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ, ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 28-02-2023 ರಂದು ಸಾಯಂಕಾಲ ಸಮಯದಲ್ಲಿ ದಾವಣಗೆರೆ ಡಿ.ಸಿ.ಆರ್.ಬಿ ಘಟಕದ ಪ್ರಭಾರ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಶಿವಾನಂದ ಪವಾಡಶೆಟ್ಟಿ (ಡಿವೈಎಸ್ಪಿ, ಐಜಿಪಿ, ಪೂರ್ವ ವಲಯ ಕಚೇರಿ, ದಾವಣಗೆರೆ) ರವರು ಹೊನ್ನಾಳಿ ತಾಲ್ಲೂಕು ಬೀರಗೊಂಡನಹಳ್ಳಿ ಗ್ರಾಮದ ಸಮೀಪ ಹಾಯ್ದು ಹೋಗಿರುವ ತುಂಗಭದ್ರಾ ನದಿ ಪಾತ್ರದಲ್ಲಿ ಸಿಗುವಂತಹ ಮರಳನ್ನು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಗೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಶ್ರೀ ಸಿದ್ದೇಗೌಡ ಹೆಚ್.ಎಂ ಪೊಲೀಸ್ ನಿರೀಕ್ಷಕರು, ಹೊನ್ನಾಳಿ ಪೊಲೀಸ್ ಠಾಣೆ ರವರು ಮತ್ತು ಡಿ.ಸಿ.ಆರ್.ಬಿ ಘಟಕದ ಸಿಬ್ಬಂದಿ ಮತ್ತು ಹೊನ್ನಾಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಎಸ್ ಪಿ ಸಿ.ಬಿ ರಿಷ್ಯಂತ್, ಹೆಚ್ಚುವರಿ ಎಸ್ ಪಿ ಆರ್.ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



