ದಾವಣಗೆರೆ: ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ವಿಶ್ವನಾಥ್ ಪಿ. ಮುದಜ್ಜಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಆ ಸ್ಥಾನಕ್ಕೆ ರೇಣುಕಾ ಅವರನ್ನು ನಿಯೋಜಿಸಲಾಗಿದೆ.
ಜಕಾತಿಗೆ ಟೆಂಡರ್ ನೀಡಲು ಪಾಲಿಕೆ ವ್ಯವಸ್ಥಾಪಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದಾದ ಬಳಿಕ ಈ ಲಂಚದ ಹಣದಲ್ಲಿ ಪಾಲಿಕೆ ಆಯುಕ್ತರಿಗೂ ಪಾಲಿದೆ ಎಂಬ ಗುತ್ತುಗೆದಾರ ಮತ್ತು ಪಾಲಿಕೆ ವ್ಯಸ್ಥಾಪಕ ಎಂದು ಮಾತನಾಡುದ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಇದೀಗ ಸರ್ಕಾರ ಪಾಲಿಕೆ ಆಯುಕ್ತ ಮುದ್ದಜ್ಜಿ ಎತ್ತಂಗಡಿ ಮಾಡಿ, ನೂತನ ಆಯುಕ್ತರನ್ನು ನೇಮಿಸಿದೆ.
ವಿಶ್ವನಾಥ್ ಪಿ. ಮುದಜ್ಜಿ ಅವರನ್ನು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕರನ್ನಾಗಿ ಮಾಡಲಾಗಿದೆ.
ರೇಣುಕಾ ಅವರನ್ನು ಮುಂದಿನ 2 ವರ್ಷಗಳಿಗೆ ಅಥವಾ ಮುಂದಿನ ಆದೇಶದವರೆಗೆ ಪಾಲಿಕೆ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.



