ದಾವಣಗೆರೆ: ಇದೇ ನವೆಂಬರ್ 17 ರಿಂದ 20 ರ ವರೆಗೆ ನಡೆಯಲಿರುವ ಉತ್ತರಕಾಂಡ ರಾಜ್ಯದ ಹರಿದ್ವಾರದಲ್ಲಿ 48ನೇ ಬಾಲಕರ ವಿಭಾಗದ ಜೂನಿಯರ್ ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ಗೆ ಕರ್ನಾಟಕ ರಾಜ್ಯ ತಂಡಕ್ಕೆ ದಾವಣಗೆರೆ ಜಿಲ್ಲೆಯಿಂದ ತೋಳಹುಣಸೆಯ ಎನ್. ಜಿತೇಂದ್ರ ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಯು ಆದ ಎಂ ನಾಗರಾಜ್ ಮತ್ತು ಚೇರ್ಮನ್ ಬಿ.ಜಿ .ಅಜಯ್ ಕುಮಾರ್ .ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷರು ಎಚ್. ನಿಜಗುಣ, ಗೌರವಾಧ್ಯಕ್ಷರು ಹಾಗೂ ಸೈಯದ್ ನಿಸಾರ್ ತರಬೇತುದಾರರಾದ ಬೇತುರೊಡಿ ನ ಡಿ .ರಾಜು ಹಾಗೂ ಸಿ.ಎಚ್ .ಪುಟ್ಟರಾಜ. ಕಬಡ್ಡಿಯ ಕ್ರೀಡಾಪಟುಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.



