ದಾವಣಗೆರೆ: ದಾವಣಗೆರೆ ಮಹಾನಗರಕ್ಕೆ ಸರಬರಾಜಾಗುವ ನೀರಿನ ಮೂಲವಾದ ತುಂಗಾಭದ್ರ ನದಿಯಲ್ಲಿ ಮಳೆಯ ನೀರು ಹರಿದು ಬರುತ್ತಿದ್ದು, ಈ ನೀರನ್ನು ಶುದ್ಧಿಕರಿಸಿದ ನಂತರವೂ ಪರಿ ಶುದ್ಧ ನೀರು ದೊರಕುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಮಹಾನಗರ ಪಾಲಿಕೆ ವತಿಯಿಂದ ಸರಬರಾಜಾಗುವ ನೀರನ್ನು ಕುದಿಸಿ ಕುಡಿಯಬೇಕಾಗಿ ಪಾಲಿಕೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.



