ದಾವಣಗೆರೆ: ದಾವಣಗೆರೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಹೊಸದಾಗಿ ನಿರ್ಮಾಣವಾಗಿರುವ ಹೊಸ ರಿಂಗ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರ ತೆಲಗಿ ರತ್ನಮ್ಮ ಸಿದ್ದೇಶಿ ರೇಸಿಡೆನ್ಸಿಯಲ್ ಲೇಔಟ್ನಲ್ಲಿರುವ ಡಿ.ದೇವರಾಜು ಅರಸು ಭವನಕ್ಕೆ ಆಗಷ್ಟ್ 04 ರಂದು ರಂದು ಸ್ಥಳಾಂತರಿಸಲಾಗುವುದು. ಡಿ.ದೇವರಾಜ್ ಅರಸು ಭವನದಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ನಡೆಸಲಾಗುವುದು ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



