ದಾವಣಗೆರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜು.01 ರಿಂದ 05 ರವರೆಗೆ ನಡೆಯುವ ನ್ಯಾಷನಲ್ ರೋವರ್ಸ್ ಮತ್ತು ರೇಂಜರ್ಸ್ ಕಾರ್ಣಿವಲ್ ಟು ಕಮರೆಟ್ ಅಜಾದಿ ಕಾ ಅಮೃತ ಮಹೋತ್ಸವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುವ ಶಿಬಿರದಲ್ಲಿ ನಮ್ಮ ದಾವಣಗೆರೆ ಜಿಲ್ಲೆಯ ರೋವರ್ಸ್ ವಿದ್ಯಾರ್ಥಿಗಳಾದ ನವೀನ್ ಉ ಚಾಣಕ್ಯ, ಮುಸ್ತಫ , ಗುರುಬಸವರಾಜ್, ರೇಂಜರ್ಸ್ ವಿದ್ಯಾರ್ಥಿಗಳು ರೋಹಿಣಿ, ತನು, ಕಾವ್ಯ ಭಾಗವಹಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಜಿಲ್ಲಾ ಮುಖ್ಯ ಆಯುಕ್ತರು ಮುರುಘರಾಜೇಂದ್ರ ಚಿಗಟೇರಿ ಮತ್ತು ಡಾ ನಾರಾಯಣ ಸ್ವಾಮಿ RSL ಅವರು ಮಾರ್ಗದರ್ಶನ ನೀಡಿದರು.



