ದಾವಣಗೆರೆ: 2022-23ನೇ ಸಾಲಿನಲ್ಲಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ “ಸಾಧನ ಸಲಕರಣೆ” ಯೋಜನೆಗೆ ಅರ್ಹ ವಿಕಲಚೇತನರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ ಯೋಜನೆಯಡಿ ತಮಗೆ ಅವಶ್ಯಕತೆ ಇರುವ ಸಲಕರಣೆಗಳನ್ನು ಪಡೆಯಲು ದಾವಣಗೆರೆ ಜಿಲ್ಲೆಯ ಆಯಾ ತಾಲ್ಲೂಕಿನ ವಿಕಲಚೇತನರು ಕಡ್ಡಾಯವಾಗಿ ಅಂಗವಿಕಲರ ಗುರುತಿನ ಕಾರ್ಡ್ ಜೆರಾಕ್ಸ್ (ಯು.ಡಿ.ಐ.ಡಿ. ಕಾಡ್), ಇತ್ತೀಚಿನ ಜಾತಿ & ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ್, ರೇಷನ್ ಕಾರ್ಡ್ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಈ ಕೆಳಕಂಡ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ (MRW) ಕಛೇರಿಗೆ ಬೇಟಿ ನೀಡಿ ಅರ್ಜಿ ಪಡೆದು ಮೇಲ್ಕಂಡ ದಾಖಲೆಗಳೊಂದಿಗೆ ಜುಲೈ.20 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ :- ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹೊನ್ನಾಳಿ ಶೈಲಜಾ ಕೆ.ಎಂ. ಮೊ ನಂ: 9886366809, ಚನ್ನಗಿರಿ ಕೆ.ಸುಬ್ರಮಣ್ಯಂ ಮೊ ನಂ: 9945738141, ಜಗಳೂರು ಎಂ.ಕೆ ಶಿವನಗೌಡ ಮೊ ನಂ: 9902105734, ಹರಿಹರ ಶಶಿಕಲಾ ಟಿ. ಮೊ ನಂ: 9945458058, ದಾವಣಗೆರೆ ಚನ್ನಪ್ಪ.ಬಿ ಮೊ ನಂ: 9590829024 ಇವರನ್ನು ಸಂಪರ್ಕಿಸಬುದಾಗಿದೆ ಎಂದು ದಾವಣಗೆರೆ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



