ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯಡಿ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೊರಟಿಕೆರೆ, ದೊಡ್ಡಬ್ಬಿಗೆರೆ, ಬುಳ್ಳಸಾಗರ, ಬೆಳ್ಳಿಗನೂರು, ಹಬ್ಬಳಗೆರೆ, ತಿಪ್ಪಗೊಂಡನಹಳ್ಳಿ, ಬೆಳಲಗೆರೆ, ಕೋಟೆಹಾಳು, ನಲ್ಲೂರು. ನ್ಯಾಮತಿ ತಾಲ್ಲೂಕಿನ ಗುಡ್ಡೆಹಳ್ಳಿ. ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹೆಬ್ಬಾಳು, ಅಣಬೇರು. ಹರಿಹರ ತಾಲ್ಲೂಕಿನ ಜಿಗಳಿ. ಹೊನ್ನಾಳಿ ತಾಲ್ಲೂಕಿನ ಎಕ್ಕನಹಳ್ಳಿ, ಮಾಸಡಿ, ತಿಮ್ಲಾಪುರ. ಜಗಳೂರು ತಾಲ್ಲೂಕಿನ ಕೆಚ್ಚೇನಹಳ್ಳಿ, ಬಿದರಕೆರೆ, ಸೊಕ್ಕೆ ಗ್ರಾಮಗಳ ಆಸಕ್ತ ಅಭ್ಯರ್ಥಿಗಳು www.karnatakaone.gov.in ಅಥವಾ sevasindhuservices.karnataka.gov.in ಪೋರ್ಟಲ್ ಮೂಲಕ ಅರ್ಜಿ ದಾಖಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 7829274377, 9743669741, 9686579224 ಅಥವಾ ಇ-ಮೇಲ್ ವಿಳಾಸ onehelpdesk@karnataka.gov.in ಸಂಪರ್ಕಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



