ದಾವಣಗೆರೆ: ನಗರದ GMIT ಮಹಾವಿದ್ಯಾಲಯದಲ್ಲಿ ಎಂಬಿಎ ಪ್ರಥಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ವೈ. ವಿಜಯಕುಮಾರ್ ವಹಿಸಿದ್ದರು. ಮುಖ್ಯಅಥಿತಿಯಾಗಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ವೈ. ಯು. ಸುಭಾಶ್ಚಂದ್ರ ಉಪಸ್ಥಿತತಿದ್ದರು. .
ಪ್ರತಿವರ್ಷವೂ ಎಂ ಬಿಎ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ತರಬೇತಿಯನ್ನು ನೀಡುತ್ತದೆ. ಈ ವರ್ಷ ಸುಮಾರು 1೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಗೆ ನೋಂದಾಯಿಸಿದ್ದರು. ತರಬೇತಿಯ ಮೂಲಕ ಎಂ. ಬಿ.ಎ ವಿಭಾಗಕ್ಕೆ ಸೇರಿರುವ ಅರ್ಹ 7 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಮುಖಾಂತರ ತಲಾ 10,000/- ರೂ ವಿತರಿಸಲಾಯಿತು. ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಮಹಾವಿದ್ಯಾಲಕ್ಕೆ ಹೆಸರು ತರುವಂತೆ ಈ ವೇಳೆ ಹಾರೈಸಿದರು . ಈ ಸಂದರ್ಭ್ದಲ್ಲಿ ಎಂ. ಬಿ.ಎ ವಿಭಾಗದ ನಿರ್ದೇಶಕ ಪ್ರೊ. ಬಿ. ಬಕ್ಕಪ್ಪ, ಡಾ. ಗುರುರಾಜ್ ಫಾಟಕ್, ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ. ಬಿ. ಆರ್ ಇದ್ದರು.



