ದಾವಣಗೆರೆ: ನಗರದ ಗಡಿಯಾರ ಕಂಬದ ಹತ್ತಿರ ನಡೆಯುತ್ತಿರುವ ರಾಜ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಮೇಯರ್ ಜಯಮ್ಮ ಗೋಪಿ ನಾಯ್ಕ ಅವರು ಇಂದು ವೀಕ್ಷಿಸಿದರು.
ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಮುಂದಿನ ವಾರದರಿಂದ ಆರಂಭವಾಗುವ ಹಿನ್ನೆಲೆ ಭಕ್ತಾದಿಗಳು ಮತ್ತು ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಸ್ಮಾರ್ಟ್ ಸಿಟಿ ನಿರ್ದೇಶಕ ಎಸ್.ಬಾಬು, ಮೋಹನ್ ಕೆ.ಎಸ್, ಎಚ್. ಓ.ದುಗ್ಗಪ್ಪ, ಪಾಲಿಕೆ ಇಂಜಿನಿಯರ್ ಸತೀಶ್ ನಾಯ್ಕ, ಸ್ಮಾರ್ಟ್ ಸಿಟಿ ಎ.ಇ.ವೀರೇಶ್ ಎ.ಎಚ್, ಉಪಸ್ಥಿತರಿದ್ದರು.