ಡಿವಿಜಿ ಸುದ್ದಿ, ದಾವಣಗೆರೆ: ಪ್ರತಿ ವರ್ಷದಂತೆ ಈ ವರ್ಷವು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಸೋಮೇಶ್ವರ ವಿದ್ಯಾಲಯದಿಂದ ಜಿಲ್ಲಾ ಮಟ್ಟದ ಅಂತರ್ ಶಾಲಾ ಚದುರಂಗ ಸ್ಪರ್ಧೆಯನ್ನು ಆಯೋಜಿಸಿದೆ.
ನ. 23 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗೆ ಕಿರಿಯರ ವಿಭಾಗದಲ್ಲಿ 6 ರಿಂದ 12 ವರ್ಷ ಮತ್ತು ಹಿರಿಯರ ವಿಭಾಗಕ್ಕೆ 12 ರಿಂದ 16 ವರ್ಷ ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ. ಮೇಲ್ಕಂಡ ಸ್ಪರ್ಧೆಗೆ ಪ್ರತಿ ವಿಭಾಗಕ್ಕೆ ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.
ಪ್ರಥಮ ಬಹುಮಾನ :- 3000 ರೂ ನಗದು, ಹಾಗೂ ಸೋಮೇಶ್ವರ ಚದುರಂಗಸಿ ಪ್ರಶಸ್ತಿ ಫಲಕ.
ದ್ವಿತೀಯ ಬಹುಮಾನ :- 2000 ರೂ ನಗದು ಹಾಗೂ ಪ್ರಶಸ್ತಿ ಪತ್ರ
ತೃತೀಯ ಬಹುಮಾನ:- ಪ್ರಶಸ್ತಿ ಪತ್ರ
ಆಸಕ್ತ ಸ್ಪರ್ಧಿಗಳು ನ. 20 ರೊಳಗಾಗಿ ಶಾಲೆಯ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ ಹೆಸರುಗಳನ್ನು ಶಾಲಾ ಸೋಮೇಶ್ವರ ಶಾಲಾ ಕಚೇರಿಯಲ್ಲಿ ನೋಂದಾಯಿಸಲು ಕೋರಲಾಗಿದೆ.



