ದಾವಣಗೆರೆ: ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ಅ.25 ರ ಬೆಳಿಗ್ಗೆ 10.30 ಕ್ಕೆ ವಸಂತ ರಸ್ತೆಯಲ್ಲಿರುವ ಬಸವನಗರ ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು.
ಅಂತಿಮ ಸವಾಲುದಾರರು ಹರಾಜು ಖಾಯಂಗೊಳಿಸಿದ ತಕ್ಷಣ ಸ್ಥಳದಲ್ಲಿ ಪೂರ್ತಿ ಹಣ ಪಾವತಿಸಿ, ವಸ್ತುಗಳನ್ನು ಪಡೆಯಬಹುದು. ಹರಾಜನ್ನು ಖಾಯಂಗೊಳಿಸುವ, ರದ್ದುಪಡಿಸುವ ಹಾಗೂ ಯಾವುದೇ ಬದಲಾವಣೆ ಮಾಡುವ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಲಾಗಿದ್ದು, ಅಮಾನತು ಪಡಿಸಿರುವ ವಸ್ತುಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಬಸವನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



