Connect with us

Dvgsuddi Kannada | online news portal | Kannada news online

ದಾವಣಗೆರೆಯಲ್ಲಿ ತಪ್ಪಿದ ಭಾರಿ ದುರಂತ;  ಮಧ್ಯ ರಾತ್ರಿ ಇದ್ದಕ್ಕಿದಂತೆ ಕುಸಿದ ಗೋಡೆ; 2 ಹಸು ಸಾವು,  12 ಜನ ಬಚಾವ್

harihara home

ದಾವಣಗೆರೆ

ದಾವಣಗೆರೆಯಲ್ಲಿ ತಪ್ಪಿದ ಭಾರಿ ದುರಂತ;  ಮಧ್ಯ ರಾತ್ರಿ ಇದ್ದಕ್ಕಿದಂತೆ ಕುಸಿದ ಗೋಡೆ; 2 ಹಸು ಸಾವು,  12 ಜನ ಬಚಾವ್

 ದಾವಣಗೆರೆ: ಜಿಲ್ಲೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ.  ಮನೆಯಲ್ಲಿ ಮಲಗಿದ್ದ ವೇಳೆ ಮಧ್ಯ ರಾತ್ರಿ  ಇದ್ದಕ್ಕಿದಂತೆ ಮನೆಯೊಂದರ ಗೋಡೆ ಕುಸಿದಿದ್ದು,  ಅದೃಷ್ಟವಶಾತ್ 13 ಜನ ಪಾರಾಗಿದ್ದಾರೆ. ಈ ಘಟನೆಯಲ್ಲಿ ಇಬ್ಬರಿಗೆ  ಮಹಿಳೆಯರಿಗೆ ಗಾಯವಾಗಿದ್ದು, ಒಬ್ಬರ ಸ್ಥಿತಿ  ತೀರ ಗಂಭೀರವಾಗಿದೆ.

ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲ  ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಕಳೆದ 6 ದಿನದಿಂದ ಭಾರಿ ಮಳೆ ಸುರಿಯುತ್ತಿದ್ದು, ಅದರಲ್ಲೂ ಬುಧವಾರ  ಸತತ ಮಳೆ ಸುರಿದಿತ್ತು. ಇದರ ಪರಿಣಾಮ ಹಳೆಯ ಮನೆಯ ಗೋಡೆಗಳು ಕುಸಿತ ಪ್ರಕರಣಗಳು ಜಿಲ್ಲೆ ಕಾಣಿಸಿಕೊಂಡಿವೆ. ನಿನ್ನೆಯಷ್ಟೇ (ಅ. 07)  ಮಾಯಕೊಂಡ ಹೋಬಳಿಯಲ್ಲಿ ಮಂಜುನಾಥ್ ಎಂಬ ವ್ಯಕ್ತಿ ಗೋಡೆ ಕುಸಿದು ಸಾವನ್ನಪ್ಪಿದ್ದು, ಇದೀಗ ಇಂತಹದೇ ಮತ್ತೊಂದು  ಘಟನೆ ಹರಿಹರ ತಾಲ್ಲೂಕಿನಲ್ಲಿ  ನಡೆದಿದೆ.

ದುರಂತದಲ್ಲಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ.  2 ಹಸುಗಳು‌ ಮೃತಪಟ್ಟಿವೆ. ಗೋಡೆ ಕುಸಿತ ಸಂದರ್ಭದಲ್ಲಿ ಮನೆಯೊಳಗಿದ್ದ 12 ಜನ  ಅದೃಷ್ಟವಶಾತ್ ಪ್ರಾಣಾಪಾಯದಿಂದ  ಪಾರಾಗಿದ್ದಾರೆ. ತೀವ್ರ ಅಸ್ವಸ್ಥರಾದ ಮಹಿಳೆಯನ್ನು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ‌ ಚಿಕಿತ್ಸೆ  ನೀಡಲಾಗುತ್ತಿದೆ.  ಸ್ಥಳಕ್ಕೆ ತಹಶೀಲ್ದಾರ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top