ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಾತ್ರಿ ವೇಳೆ ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ ಬಂಧಿಸಿದ್ದಾರೆ. ಆರೋಪಿಗಳಿಂದ 58.10 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ದಿನಾಂಕ: 18.05.2026ರಂದು ಮಧ್ಯಾಹ್ನ 01.00 ಗಂಟೆಯಿಂದ ದಿನಾಂಕ:19.05.2026ರ ಬೆಳಿಗ್ಗೆ 11.00 ಗಂಟೆಯ ಮಧ್ಯದ ಅವಧಿಯಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮರಾವತಿ ಕಾಲೋನಿ ವಾಸಿ ಶ್ರೀ ಪರೀಕ್ಷಿತ್ ನಾಯ್ಡು ಅವರ ಬೀಗ ಹಾಕಿದ ಮನೆಯ ಬೇಗ ಹೊಡೆದು ಯಾರೋ ಕಳ್ಳರು ಮನೆಯ ಬೀರುವಿನಲ್ಲಿದ್ದ 483 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಹಾಗೂ 10,000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿನ ಆರೋಪಿತರನ್ನು ಹಾಗೂ ಸ್ವತ್ತಿನ ಪತ್ತೆಗಾಗಿ ಎಸ್ಪಿ ಶೇಖರ್ ಹೆಚ್.ಟಿ. ನಿರ್ದೇಶನದಲ್ಲಿ ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ ಹಾಗೂಡಿವೈಎಸ್ ಪಿ ಬಿ. ಎಸ್. ಬಸವರಾಜ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ಸುರೇಶ ಸಗರಿ, ಸಿ.ಪಿ.ಐ ಹರಿಹರ ವೃತ್ತ ಆರ್.ಎಫ್. ದೇಸಾಯಿ ಹರಿಹರ ನಗರನೇತೃತ್ವದಲ್ಲಿ ಪಿ.ಎಸ್.ಐ ಯುವರಾಜ್ ಕಂಬಳಿ, ಹಾರೂನ್ ಅಖ್ತರ್, ಶ್ರೀಪತಿ ಗಿನ್ನಿ, ಮಲೆಬೆನ್ನೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರುಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿತ್ತು.
ಪ್ರಕರಣದ ಆರೋಪಿ ಮತ್ತು ಕಳುವಾದ ಸ್ವತ್ತಿನ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡು ಪಿ.ಎಸ್.ಐ ಯುವರಾಜ್ ನೇತೃತ್ವದ ಸಿಬ್ಬಂದಿ ತಂಡವು ಕುರುಬರಹಳ್ಳಿ ಕ್ರಾಸ್ ಹತ್ತಿರ ಹರಪನಹಳ್ಳಿ ಕಡೆಯಿಂದ ಹರಿಹರ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರು ಆರೋಪಿತರನ್ನು ಬಂದಿಸಿದ್ದು, ಸದರಿ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ, 1) ಶ್ರೀಕಾಂತ ಟಿ, 30 ವರ್ಷ, ವಾಸ: ಹೊಸಪೇಟೆ ನಗರ, ವಿಜಯನಗರ ಜಿಲ್ಲೆ, 2) ರಮೇಶ ವೈ, 28 ವರ್ಷ, ವಾಸ: ಹೊಸಪೇಟೆ ನಗರ, ವಿಜಯನಗರ ಜಿಲ್ಲೆ . ಈ ಪ್ರಕರಣ ಬಯಲಿಗೆ ಬಂದಿದೆ.
ಈ ಪ್ರಕರಣದ ಅಂದಾಜು 57,40,800/-ರೂ ಮೌಲ್ಯದ ಒಟ್ಟು 409.5 ಗ್ರಾಂ ತೂಕದ ಸುಮಾರು ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು 10,000/- ರೂ ನಗದು ಹಣ, 2 ಮೊಬೈಲ್ಗಳು, ಒಂದು ಹಿರೋಹೊಂಡಾ ಬೈಕ್ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಸದರಿ ಪ್ರಕರಣದಲ್ಲಿನ ಆರೋಪಿತರ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಶೇಖರ್ ಹೆಚ್.ಟಿ ಶ್ಲಾಘಿಸಿದ್ದಾರೆ.


