ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 33 ನೇ ವಾರ್ಡ್ ಸರಸ್ವತಿ ನಗರ ಬಿಜೆಪಿ ಅಭ್ಯರ್ಥಿ ಕೆ. ಎಂ. ವೀರೇಶ್ ಅವರು, ಇವತ್ತು ವಾರ್ಡ್ ನಾದ್ಯಂತ ಭರ್ಜರಿ ಪ್ರಚಾರ ನಡೆಸಿದರು.
ಮೂಲತಃ ಕುಸ್ತಿಪಟು ಆಗಿರುವ ವೀರೇಶ್, ವಾರ್ಡ್ ಅಭಿವೃದ್ಧಿ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ವಾರ್ಡ್ ನಲ್ಲಿರುವ ನೀರಿನ ಸಮಸ್ಯೆ, ಚರಂಡಿ ನೀರು, ಬೀದಿ ದೀಪ, ಸೇರಿದಂತೆ ಅನೇಕ ಯೋಜನೆಗೆ ರೂಪುರೇಷ ಹಾಕಿಕೊಂಡಿದ್ದಾರೆ. ಮೂಲತಃ ಕ್ರೀಡಾಪಟು ಆಗಿರುವುದರಿಂದ ಕ್ರೀಡಾ ಪಟುಗಳ ಪ್ರೋತ್ಸಾಹಕ್ಕೆ ಹೆಚ್ಚಿನ ಆದ್ಯತೆ ನೀಡುವ ಭರವಸೆ ವ್ಯಕ್ತಪಡಿಸಿದ್ರು. ಈ ಬಗ್ಗೆ ಡಿವಿಜಿ ಸುದ್ದಿ ಜೊತೆ ತಮ್ಮ ಅನಿಸಿಕೆಯನ್ನು ಈ ರೀತಿ ಹಂಚಿಕೊಂಡಿದ್ದಾರೆ.



