ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಿ ಆರ್ ಪಿಸಿ 164 ನಿಯಮ ಅಡಿ ನ್ಯಾಯಾಲಯ ಅನುಮತಿ ನೀಡಿದ್ದು, ಇದೀಗ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. .
ಎಸ್ಐಟಿ ಮೇಲೆ ನಂಬಿಕೆ ಇಲ್ಲದಿರುವುದಕ್ಕೆ ನ್ಯಾಯಾಧೀಶರ ಮುಂದೆಯೇ ಯುವತಿ ಹೇಳಿಕೆ ನೀಡಲು ಅನುಮತಿ ಕೋರಿ, ಯುವತಿ ಪರ ವಕೀಲ ಜಗದೀಶ್ ಮನವಿ ಸಲ್ಲಿಸಿದ್ದರು. ಇದಕ್ಕೆ ಪೊಲೀಸರು ಯಾವುದೇ ಅಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ನ್ಯಾಯಾಲಯ ಮುಂದೆ ಹೇಳಿಕೆ ದಾಖಲಿಸಲು ಯುವತಿ ಹಾಜರಾಗಿದ್ದಾರೆ.
ನ್ಯಾಯಾಲಯ 3.30 ಸಮಯ ನಿಗದಿ ಮಾಡಿತ್ತು. ಆದರೆ, ಯುವತಿ ಅರ್ಧ ಗಂಟೆ ಮುಂಚೆಯೇ ಗೌಪ್ಯವಾಗಿ ಹಾಜರು ಪಡಿಸಲಾಗಿದೆ. ಇದೀಗ ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ ದಾಖಲಿಸಲಿದ್ದಾರೆ.



