ಬೆಂಗಳೂರು: ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ಸ್ಯಾಂಡಲ್ ವುಡ್ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇಮಕವಾಗಿದ್ದಾರೆ. ನಾಳೆ (ಮಾ. 5) ಮಧ್ಯಾಹ್ನ 3 ಗಂಟೆಗೆ ವಿಕಾಸಸೌಧದಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಉಪಸ್ಥಿತರಿರುವರು.
ಪ್ರಾಣಿ ಪ್ರಿಯ ಹಾಗೂ ಕೃಷಿಯಲ್ಲಿ ಆಸಕ್ತಿ ಹೊಂದಿರುವ ದರ್ಶನ್ ಕೃಷಿ ಸಚಿವರ ಆಹ್ವಾನವನ್ನು ಯಾವುದೇ ಸಂಭಾವನೆ ಪಡೆಯದೇ ಒಪ್ಪಿಕೊಂಡಿದ್ದರು.



