ವಿಜಯಪುರ: ರಾಜ್ಯದ ಕೃಷಿ ಅಭಿವೃದ್ಧಿಗೆ ಇಸ್ರೇಲ್ ಗಿಂತ ಸಮಗ್ರ ಕೃಷಿಯ ಕೋಲಾರ ಮಾದರಿ ಅನುಸರಿಸಲಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಮಂಗಳವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕ ಬಸರಕೋಡ ಗ್ರಾಮಗದ ಪ್ರಗತಿಪರ ರೈತ ಪವಾಡೆಪ್ಪ ಅವರ ಸಮಗ್ರ ಕೃಷಿ ಮಾದರಿಯ ತೋಟಕ್ಕೆ ಭೇಟಿ ವೇಳೆ ಮಾತನಾಡಿದರು. ರಾಜ್ಯದ ರೈತರು ಸಾವಯವ ಪದ್ಧತಿಯ ಸಮಗ್ರ ಕೃಷಿ ಮಾಡಿದಲ್ಲಿ ಕೃಷಿಯಲ್ಲಿ ವೆಚ್ಚ ಕಡಿಮೆ ಮಾಡಿ, ಲಾಭ ಗಳಿಸಲು ಸಾಧ್ಯ. ರೈತರ ಕಷ್ಟ ಪರಿಹಾರ ಆಗುತ್ತದೆ. ಸಾವಯವದ ಸಮಗ್ರ ಕೃಷಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಜೊತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಥಳೀಯ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಇದ್ದರು.



