Connect with us

Dvgsuddi Kannada | online news portal | Kannada news online

ದೇಶ ಸೇವೇಯೇ ಈಶ ಸೇವೆ : ಬಸವಪ್ರಭು ಸ್ವಾಮೀಜಿ

ದಾವಣಗೆರೆ

ದೇಶ ಸೇವೇಯೇ ಈಶ ಸೇವೆ : ಬಸವಪ್ರಭು ಸ್ವಾಮೀಜಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ದೇಶದ ಹೊರೆಗೆ ಸೈನಿಕ ಗಡಿ ಕಾಯ್ದರೆ, ದೇಶದ ಒಳಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಈ ಮೂಲಕ  ನಾವೆಲ್ಲ ನೆಮ್ಮದಿಯಾಗಿ ಬದುಕುತ್ತಿದ್ದೇವೆಂದರೆ ಸೈನಿಕರು ಮತ್ತು ಪೊಲೀಸರು ಕಾರಣವೆಂದು  ವಿರಕ್ತ ಮಠದ ಬಸವ ಪ್ರಭುಸ್ವಾಮೀಜಿ ಹೇಳಿದರು.

police and soldiers family dvgsuddi 3

ದಾವಣಗೆರೆ ಜಯದೇವ ವೃತ್ತದಲ್ಲಿ ಹುತಾತ್ಮ ಯೋಧ ಮತ್ತು ಪೊಲೀಸ್  ಕುಟುಂಬಗಳಿಗೆ ಸನ್ಮಾನ  ಮತ್ತು ಹುತಾತ್ಮ ಪೊಲೀಸರ ಸ್ಮರಣೆ  ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಮಾತನಾಡಿದ ಅವರು, ರಕ್ಷಣೆಯಲ್ಲಿ  ಪೊಲೀಸರು ಸೈನಿಕರ ಸೇವೆ ಅತ್ಯಮೂಲ್ಯವಾದದು. ಅವರ ಬಲಿದಾನಕ್ಕೆ ಯಾವುದು ಸರಿಸಾಟಿಯಲ್ಲ. ನಾವೆಲ್ಲ ಸುಖ, ಶಾಂತಿ ಸಮೃದ್ಧಿಯಿಂದ ಇರಲು ಸೈನಿಕರೇ ಕಾರಣ. ದೇಶ ಸೇವೆಯೇ ಈಶ ಸೇವೆ ಎನ್ನುವ ತತ್ವನ್ನು ಸೈನಿಕರು ಅಕ್ಷರಶಃ ಪಾಲಿಸುತ್ತಿದ್ದಾರೆ ಎಂದರು.

police and soldiers family dvgsuddi2

ದೇಶಕ್ಕೋಸ್ಕರ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಹುತಾತ್ಮರಾಗಿದ್ದಾರೆ.  ಜೀವನದಲ್ಲಿ  ಹುತಾತ್ಮರಾಗುವುದಕ್ಕೆ  ಅವಕಾಶವಿರುವುದು ಸೈನ್ಯದಲ್ಲಿ ಮಾತ್ರ. ಇಂತಹ ಹುತಾತ್ಮ ಸೈನಿಕರನ್ನು  ಎಷ್ಟು  ಸ್ಮರಣೆ ಮಾಡಿದ್ರು ಸಾಲದು. ಯುವಕರು ಯುವತಿಯರು ಸೈನ್ಯ ಸೇರಲು ಮುಂದೆ ಬರಬೇಕು . ಉತ್ತರ ಪ್ರದೇಶ, ಬಿಹಾರ ಯೋಧರ ಸಂಖ್ಯೆ ದೊಡ್ಡದಿದೆ . ಕರ್ನಾಟಕದಿಂದಲು ಸಂಖ್ಯೆ ಹೆಚ್ಚಾಗಬೇಕು ಎಂದು ಬಸವ ಪ್ರಭುಸ್ವಾಮೀಜಿ ಕರೆ ನೀಡಿದರು.

police and soldiers family dvgsuddi 4

ಈ ಸಂದರ್ಭದಲ್ಲಿ 7 ಹುತಾತ್ಮ ಪೊಲೀಸ್ ಮತ್ತು ಯೋಧ ಕುಟುಂಬಗಳನ್ನು  ಸನ್ಮಾನಿಸಲಾಯಿತು. ಎಸ್ ಪಿ  ಹನುಮಂತರಾಯ , ಸಿಆರ್ ಪಿ ಎಸ್  ಜಗದೀಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top