ದಾವಣಗೆರೆ: ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಬಗ್ಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಯಾವುದೇ ರೀತಿಯ ನೋವು, ಸತ್ಯಗ್ರಹ, ಹೋರಾಟಕ್ಕೆ ಅವಕಾಶ ಕೊಡದೇ, ಶ್ರೀಗಳ ನೀಡಿದ ಮಾರ್ಚ್ 09 ಗಡುವಿನೊಳಗೇ ಮೀಸಲಾತಿ ಘೋಷಣೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದರು. ಮೀಸಲಾತಿ ಹೆಚ್ಚಳ: ಮಾರ್ಚ್ 9ಕ್ಕೆ ಡೆಡ್ ಲೈನ್ ; ವಾಲ್ಮೀಕಿ ಶ್ರೀಗಳ ಸಾವಿನ ಹೇಳಿಕೆಯಿಂದ ವೇದಿಕೆಯಲ್ಲಿ ಗೊಂದಲ..!
ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಆಯೋಜಿಸಿದ್ದ ಮೂರನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಶ್ರೀಗಳು ಮಾರ್ಚ್ ವರೆಗೆ ಗಡುವು ನೀಡಿದ್ದಾರೆ. ಆ ಗಡುವು ಮುಗಿಯುವ ವರೆಗೆ ಮೀಸಲಾತಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು. ನಾಗಮೋಹನ್ ದಾಸ್ ವರದಿ ಪರಿಶೀಲನೆಯಲ್ಲಿದೆ. ಈ ಬಗ್ಗೆ ಸದನ ಉಪ ಸಮಿತಿ ರಚಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಮೀಸಲಾತಿ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಸ್ವಾಮೀಜಿ ತಮ್ಮ ಸಮುದಾಯ ಮೀಸಲಾತಿಗಾಗಿ ಮಾತನಾಡುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ಆದಷ್ಟು ಬೇಗ ನಿಮ್ಮ ಭರವಸೆ ಈಡೇರಸುತ್ತೇನೆ ಎಂದು ತಿಳಿಸಿದರು.



