Connect with us

Dvgsuddi Kannada | online news portal | Kannada news online

ನಾನು ಮತ್ತೆ ಹೇಳ್ತೀನಿ ಸಿಎಂ ಯಡಿಯೂರಪ್ಪ ಬದಲಾವಣೆ ನಿಶ್ಚಿತ: ಸಿದ್ದರಾಮಯ್ಯ  

ಪ್ರಮುಖ ಸುದ್ದಿ

ನಾನು ಮತ್ತೆ ಹೇಳ್ತೀನಿ ಸಿಎಂ ಯಡಿಯೂರಪ್ಪ ಬದಲಾವಣೆ ನಿಶ್ಚಿತ: ಸಿದ್ದರಾಮಯ್ಯ  

ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ನಾನು ಹೇಳಿದ್ದೆ. ಅವರ ಪಕ್ಷದವರೇ ಯತ್ನಾಳ್ ಯುಗಾದಿ ನಂತರ ಬದಲಾವಣೆ ಅನ್ನುತ್ತಿದ್ದಾರೆ.  ಅಮಿತ್ ಶಾ,ಮೋದಿ ಆಶೀರ್ವಾದ ಇರೋವರ್ಗೆ ಆಗಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ಧಾರೆ. ಆದರೆ, ನಾನು ಈಗಲೂ ಹೇಳುತ್ತಿದ್ದೇನೆ ಯಡಿಯೂರಪ್ಪ ತೆಗೆದು ಹಾಕ್ತಾರೆ ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮುಂದಿನ ಎಲ್ಲಾ ಚುನಾವಣೆಯಲ್ಲಿ ಗೆಲ್ಲೋದು ನಾವೇ; ಸಿದ್ದರಾಮಯ್ಯಗೆ ಸವಾಲು ಹಾಕಿದ ಸಿಎಂ ಯಡಿಯೂರಪ್ಪ

 ವಿಧಾನ ಸಭೆಯಲ್ಲಿ ಮಾತನಾಡಿದ ಅವರು,  ಬಿಜೆಪಿಯವರದ್ದು ವಚನ ಭ್ರಷ್ಟ ಸರ್ಕಾರ. ಅವರು ಕೊಟ್ಟ ಯಾವ ಭರವಸೆ ಈಡೇರಿಸಿಲ್ಲ. ನೀರಾವರಿಗೆ 1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರು. ಬ್ಯಾಂಕ್ ನಲ್ಲಿರುವ ರೈತರ ಸಾಲಮನ್ನಾ ಎಂದಿದ್ದರು. 5000 ಕೋಟಿ ರೈತರ ಫಂಡ್ ಇಡುತ್ತೇವೆ. ರೈತರ ಮಕ್ಕಳ ಶಿಕ್ಷಣಕ್ಕೆ ಫಂಡ್ ಇಡುತ್ತೇವೆ ಅಂದ್ರು. ಇಸ್ತ್ರೇಲ್ ಗೆ 3 ಸಾವಿರ ರೈತರ ಮಕ್ಕಳನ್ನು ಅಧ್ಯಯನಕ್ಕೆ ಕಳಿಸುತ್ತೇವೆ ಅಂದರು. ಆದರೆ, ಯಾವ ಭರವಸೆಯನ್ನು ಅವರು ಈಡೇರಿಸಲಿಲ್ಲ ಎಂದು ಕಿಡಿಕಾರಿದರು.

ಶಾಸಕರ ಅನುದಾನದ ಬಗ್ಗೆ ಉತ್ತರವಿಲ್ಲ. 5498 ಕೋಟಿ 15ನೇ ಪೇ ಕಮೀಷನ್ ಹಣ ಬರಬೇಕು. ಕೇಂದ್ರದಲ್ಲಿ ಅದನ್ನೂ ಕೇಳಲಿಲ್ಲ. ಎಸ್ಸಿಪಿ, ಟಿಎಸ್ಪಿ ಹಣ ನಾವು 30 ಸಾವಿರ ಕೋಟಿ ಇಟ್ಟಿದ್ದೆವು. ಇವರು 25 ಸಾವಿರ ಕೋಟಿಗೆ ಇಳಿಸಿದ್ದಾರೆ. ಎಸ್ಸಿ, ಎಸ್ಟಿ, ಮೈನಾರಿಟಿ, ಒಬಿಸಿ ಮಕ್ಕಳ ಸ್ಕಾಲರ್ ಪೆಂಡಿಂಗ್ ಉಳಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನ ನಿಲ್ಲಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೋಮಣ್ಣ ಒಂದೇ ಒಂದು ಮನೆ ಕೊಟ್ಟಿದ್ದಾನಾ?. ಮನೆಗಳ ನಿರ್ಮಾಣವೇ ನಿಂತು ಹೋಗಿದೆ. ನಾವು ಪ್ರತಿವರ್ಷ 3 ಲಕ್ಷ ಮನೆ ಕಟ್ಟಿದ್ದೆವು. ಈಗ ಇವರು ಮನೆಗಳನ್ನೇ ಕಟ್ಟುತ್ತಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚವಿಲ್ಲದೆ ಟ್ರಾನ್ಸ್ ಫರ್ ಆಗ್ತಿಲ್ಲ. ಜನರನ್ನು ಮರುಳು ಮಾಡೋಕೆ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top